ಲಿಂಗಸುಗೂರು : ತಾಲೂಕಿನ ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರು ಕ್ಷೇತ್ರದ ಅಭಿವೃದ್ಧಿಗೆ ಚಿಂತನೆ ಮಾಡದೆ ಕೇವಲ ಅಭಿವೃದ್ಧಿ ಹೆಸರಿನಲ್ಲಿ ಲೂಟಿ ಮಾಡುವ ಮೂಲಕ ಗುತ್ತಿಗೆದಾರಿಕೆ ಉಳಿಸಿಕೊಳ್ಳಲು...
ಲಿಂಗಸುಗೂರು : ತಾಲೂಕಿನ ಗುಂತಗೋಳ ಗ್ರಾಮದಲ್ಲಿ ಡೆಂಗ್ಯೂ ಹಾಗೂ ಝಿಕಾ ವೈರಸ್ ಜ್ವರ ಕುರಿತು ಆರೋಗ್ಯೆ ಇಲಾಖೆಯು ಸಾರ್ವಜನಿಕರಿಗೆ ಮುಂಜಾಗ್ರತೆ ಮಾಹಿತಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು....
ಲಿಂಗಸುಗೂರು : ಒಂದು ಪಹಣಿ ತಿದ್ದುಪಡಿ ಮಾಡಬೇಕಂದ್ರೆ ಅಲ್ಲಿನ ಲೆಕ್ಕಾಧಿಕಾರಿಗಳಿಗೆ 5000 ಕೊಡಲೇಬೇಕು, ಕಡಿಮೆ ಏನಾದರೂ ಕೊಟ್ರೆ ನನಗೆ ಕುಡಿಯೋದಿಲ್ಲ ಇನ್ನ ಮೇಲಾಧಿಕಾರಿಗಳಿಗೆ ಏನು ಕೊಡಬೇಕು ಅಂತ...
ಲಿಂಗಸುಗೂರು: ವಾತಾವರಣದ ವೈಪರಿತ್ಯ ಇದೀಗ ಕಡಲೆ, ಶೇಂಗಾ ಬೆಳೆಗಾರರನ್ನು ಸಂಕಷ್ಟಕ್ಕೆ ಸಲುಕಿಸುತ್ತಿದೆ. ಕಡಲೆ ಬೆಳೆಗೆ ಹಸಿರು, ಕಂದು ಬಣ್ಣದ ಹುಳು ಕಾಟ ಹೆಚ್ಚಾಗಿದ್ದು, ರೈತರನ್ನು ಕಂಗಾಲಾಗಿಸಿದೆ. ರಾಯಚೂರು...
ಲಿಗಸುಗೂರು: 371 (ಜೆ ) ಸಂಪೂರ್ಣ ಫಲ ಸಿಗುತ್ತಿಲ್ಲ. ಸರ್ಕಾರ ಮೀನಾಮೇಷಗಳನ್ನು ಎಣಿಸದೆ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಕ್ರಿಯಾಶೀಲತೆಯನ್ನು ತೋರಿಸಬೇಕಾಗಿದೆ. ಜಿಲ್ಲೆಗಳಲ್ಲಿ ಅನೇಕ ಸಮಸ್ಯೆಗಳಿವೆ. ಸಾಕಷ್ಟು ಸಂಪನ್ಮೂಲಗಳಿದ್ದರೂ ಅವುಗಳ ಲಾಭ ಬೇರೆ ಜನ ಪಡೆದುಕೊಳ್ಳುತ್ತಿದ್ದಾರೆ. ಈ ಭಾಗದ ಎಲ್ಲ ಹೋರಾಟಗಳ ಬದುಕಿಗೆ ಮಾಧ್ಯಮಗಳು ಧ್ವನಿಯಾಗಿ ನಿಲ್ಲುತ್ತಿರುವುದು ನಮಗೆ ಸ್ಫೂರ್ತಿಯಾಗಿದೆ ಎಂದು ಸಾಹಿತಿ ವೀರಹನುಮಾನ ಹೇಳಿದರು. ಜಿಲ್ಲೆಯಲ್ಲಿ ಸಮೃದ್ಧ ಸಂಪನ್ಮೂಲಗಳಿವೆ. ಎರಡು ನದಿಗಳು ಹರಿಯುತ್ತಿವೆ. ಆದರೂ ನೀರಿನ ದಾಹ ತೀರಿಸಲಾಗುತ್ತಿಲ್ಲ. ಏರುತ್ತಿರುವ ಬಿಸಿಲಿನ ತಾಪವಿದೆ, ಬತ್ತಿದ ಕೆರೆಗಳು , ಬಡತನ , ದಾರಿದ್ರ್ಯ ನಮ್ಮ ಜೊತೆಯಲ್ಲಿಯೇ ನೆಲೆಯಾಗಿವೆ. ಕೃಷಿಗೆ ಅದರಲ್ಲೂ ಹತ್ತಿ , ಭತ್ತಕ್ಕೆ ಹೆಸರಾದ ನಮ್ಮ ಜಿಲ್ಲೆ ಆ ಹೆಸರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿಲ್ಲ. ರೈತರ ಬಾಳನ್ನು ಹಸನು ಮಾಡುವ , ಆತ ಹೆಮ್ಮೆಯಿಂದ ಬಾಳುವ ಪರಿಸ್ಥಿತಿ ನಿರ್ಮಾಣವಾಗಿಲ್ಲ' ಎಂದು ಕಳವಳ ವ್ಯಕ್ತಪಡಿಸಿದರು. ಜಿಲ್ಲೆಯ...
ಲಿಂಗಸುಗೂರು : ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು, ಹಿಂದುಳಿದ ರಾಯಚೂರು ಜಿಲ್ಲೆಗೆ ಐಐಟಿ ಕೈತಪ್ಪಲು ಜಿಲ್ಲೆಯ ನಪುಂಸಕ ರಾಜಕಾರಣವೇ ಕಾರಣ ಎಂದು ಇಲ್ಲಿನ ರಾಜಕಾರಣಿಗಳ ವೈಫಲ್ಯವನ್ನು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಬಹಿರಂಗವಾಗಿ ಒಪ್ಪಿಕೊಂಡರು. 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಐಐಟಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗಿತ್ತು. ಇದರ ಜೊತೆಗೆ ಸಂವಿದಾನದ 371(ಜೆ), ಕಲಂನಡಿ ಐಐಟಿ ನೀಡಬೇಕಿತ್ತು. ಆದರೆ, ರಾಜಕೀಯ ಇಚ್ಛಾಶಕ್ತಿ, ಜಿಲ್ಲೆಯ ನಾಯಕತ್ವದ ವೈಫಲ್ಯದಿಂದ ಐಐಟಿ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಏಮ್ಸ್ ನೀಡಬೇಕೆಂದು ಈಗಾಗಲೆ ಹಲವು ಬಗೆ ಹೋರಾಟಗಳು ನಡೆದಿವೆ. ಆದರೂ ಸರ್ಕಾರ ಗಮನಿಸುತ್ತಿಲ್ಲ. ಆದರೆ ಏಮ್ಸ್ ನೀಡದೇ ಹೋದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದು, ಜಿಲ್ಲೆಗೆ ಏಮ್ಸ್ ನೀಡಬೇಕೆಂಬ ಒತ್ತಡ ಹಿನ್ನೆಲೆಯಲ್ಲಿ ಸರ್ಕಾರ ಏಮ್ಸ್ ಬೇರೆ ಕಡೆ ನೀಡಿಲ್ಲ....
ಲಿಂಗಸಗೂರು : ನಗರದ ಕರಡಕಲ್ ಕೆರೆಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾಗಿದ್ದು, ಹೆಣ್ಣು ಎಂಬ ಕಾರಣಕ್ಕೆ ನೀರಿಗೆ ಎಸೆದಿರಬಹುದು ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ. ಪುರಸಭೆ ವ್ಯಾಪ್ತಿಯ ಕರಡಕಲ್ ಕೆರೆಯಲ್ಲಿ ನವಜಾತ ಶಿಶುವೊಂದು ಶವವಾಗಿ ಪತ್ತೆಯಾಗಿದ್ದು ಸಾರ್ವಜನಿಕರು ತನಿಖೆಗೆ ಒತ್ತಾಯಿಸಿದ ಘಟನೆ ಜರುಗಿದೆ. ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಹೊರವಲಯದ ಅತ್ತೆ-ಸೊಸೆ ಗುಡ್ಡದ ಹತ್ತಿರವಿರುವ ಬ್ರಿಜ್ ಹತ್ತಿರದಲ್ಲಿ ನವಜಾತ ಹೆಣ್ಣುಶಿಶುವೊಂದು ಶವವಾಗಿ ಪತ್ತೆಯಾಗಿದೆ. ಶಿಶುನೀರಿಗೆ ಬಿದ್ದು ಎರಡು ಮೂರು ದಿನಗಳಾಗಿರಬಹುದು ಎಂದು ಹೇಳಲಾಗುತ್ತಿದ್ದು ಮಗುವಿನ ದೇಹದ ಭಾಗವನ್ನು ಜಲಚರಗಳು ತಿಂದಿವೆ. ನವಜಾತ ಹೆಣ್ಣು ಶಿಶುವಾಗಿದೆ. ಆಸ್ಪತ್ರೆಯಲ್ಲಿ ಜನಿಸಿದ ಈ ಶಿಶುವನ್ನು ಹೆಣ್ಣು ಎಂಬ ಕಾರಣಕ್ಕೆ ನೀರಿಗೆ ಎಸೆದು ಹೋಗಿದ್ದಾರೆಯೋ ಅಥವಾ ಬೇರೆ ಕಾರಣವಿದೆಯೋ ಎಂಬುದು ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಿದೆ....