K2kannadanews.in
Crime News ರಾಯಚೂರು : ಇತ್ತಿಚೆಗೆ ನಿಶ್ಚಿತಾರ್ಥವಾಗಿದ್ದ (engaged) ಯುವತಿಯ ಶವ ಬೆಡ್ ರೂಮ್ (Bedroom) ನಲ್ಲಿ ರಕ್ತ ಸಿಕ್ತವಾಗಿ ಅನುಮಾನಾಸ್ಪದವಾಗಿ ಪತ್ತೆಯಾದ ಘಟನೆ ದಂಡ್ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಹೌದು ರಾಯಚೂರು (Raichur) ತಾಲ್ಲೂಕಿನ ಯರಮರಸ್ ಬಳಿಯ ದಂಡ್ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುನೀತಾ(sunita 26) ಎಂಬ ಯುವತಿಯ ಶವ (Dead body) ಅನುಮಾನಾಸ್ಪದವಾಗಿ ಪತ್ತೆಯಾಗಿದೆ. ಮನೆಯವರ ಮದುವೆ (Marriage) ಪ್ರಸ್ತಾಪಕ್ಕೆ ಮನನೊಂದಿದ್ದ ಮೃತ ಯುವತಿ, ಒಲ್ಲದ ಮನಸ್ಸಿನಿಂದ ಮದುವೆಗೆ ಒಪ್ಪಿಕೊಂಡಿದ್ದಳು, ಮನೆಯಲ್ಲಿ ತಾಯಿ (mother) ಮತ್ತು ಅಣ್ಣನ (Brother) ಜೊತೆ ಯುವತಿ ಮನಸ್ತಾಪ ಮಾಡಿಕೊಂಡಿದ್ದಳು, ಇದೇ ಕಾರಣಕ್ಕೆ ಹಲವು ಬಾರಿ ಮನೆ ಬಿಟ್ಟು ಹೋಗಿದ್ದಳು ಎಂದು ಹೇಳಲಾಗುತ್ತಿದೆ. ಮದುವೆ ಪ್ರಸ್ತಾಪದಿಂದ ಮಾನಸಿಕ ಸ್ಥಿಮಿತ (Mentally district) ಕಳೆದುಕೊಂಡಿದ್ದಳಂತೆ ಸುನೀತಾ. ಇದೇ ಕಾರಣಕ್ಕೆ ದಿ.26-04-2024 ರಂದು ರಾತ್ರಿ ಚಾಕುವಿನಿಂದ ಚುಚ್ಚಿಕೊಂಡು ಮೃತಪ್ಟಿದ್ದಾಳೆ ಎಂದು ತಾಯಿ & ಆಕೆಯ ಅಣ್ಣ ಹೇಳಿಕೆ ನೀಡಿದ್ದಾರೆ.
ಮೃತ ಯುವತಿ ದೇಹದ ಮೇಲೆ ಚಾಕುವಿನಿಂದ ಹಲ್ಲೆಯಾದ ಗುರುತು ಪತ್ತರಯಾಗಿದ್ದು, ಸುನೀತಾಳ ಎದೆ ಹಾಗೂ ಕತ್ತು, ಕಿವಿಯ ಮೇಲೆ ಗಾಯದ ಗುರುತುಗಳಿವೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುನೀತಾಳನ್ನ ಮೊದಲು ನೋಡಿದ್ದ ತಾಯಿ, ದಿ.27-04-24 ರಂದು ಬೆಳಗ್ಗೆ ಬೆಡ್ ರೂಮಿಗೆ ಹೋಗಿ ನೋಡಿದಾಗ ಮಗಳ ಶವವಾವಗಿ ಬಿದ್ದಿದ್ದಳು ಎಂದು ತಾಯಿ ಹೇಳಿಕೆ ನೀಡಿದ್ದು, ಆದರೆ ತಂಗಿಯ ಮರಣದಲ್ಲಿ ಸಂಶಯ ವ್ಯಕ್ತ ಪಡಿಸಿದ ಅಕ್ಕ, ಸಂಶಯಾಸ್ಪದ ಸಾವು ಎಂಬ ಪ್ರಕರಣ ದಾಖಲಿಸಿಕೊಂಡ ರಾಯಚೂರು ಗ್ರಾಮಾಂತರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
[ays_poll id=3]