K2kannadanews.in
Ram, kesari hanumanta ರಾಯಚೂರು : ರಾಮ ,ಕೆಸರಿ ,ಹನುಮಂತ ಅಂದರೆ ಡಿ ಕೆ ಶಿವಕುಮಾರ್ ( D K Shivakumar) ಸಿದ್ದರಾಮಯ್ಯಗೆ (Siddaramayya) ಭಯ ಯಾಕೆ ಅಂತ ಗೊತ್ತಿಲ್ಲ. ಆದ್ರೆ ರಾಷ್ಟ್ರ ಧ್ವಜ (National Flag) ಕನ್ನಡ ಧ್ವಜ (Kannada flag) ಹನುಮ ಧ್ವಜ (hanumanta flag) ಬಗ್ಗೆ ರಾಜಕಾರಣ (Political)ಮಾಡಬೇಡಿ ಎಂದು ರಾಯಚೂರಿನಲ್ಲಿ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ (K s Eshwarappa) ಹೇಳಿದರು.
ಕೆರೆಗೋಡು ಗಲಾಟೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ ಗ್ರಾಮ ಪಂಚಾಯತಿ ಪುಸ್ತಕದಲ್ಲಿ ಹನುಮ ಧ್ವಜದ ರೆಸಲ್ಯೂಷನ್ (Resolution) ಆಗಿದೆ ಈಗ ಪುಸ್ತಕ ಇಲ್ಲಾ ಅಂತಾರೆ. ರಾಮ ,ಕೆಸರಿ ,ಹನುಮಂತ ಅಂದರೆ ಡಿಕೆಶಿ ಸಿದ್ದರಾಮಯ್ಯಗೆ ಭಯ ಯಾಕೆ ಅಂತ ಗೊತ್ತಿಲ್ಲ. ಅಲ್ಲಿ ನಾವು ಅನುಮತಿ ಕೊಟ್ಟಿದ್ದು ರಾಷ್ಟ್ರ ಧ್ವಜ ಹಾರಿಸಲು ಅಂತಿದ್ದಾರೆ. ರಾಷ್ಟ್ರ ಧ್ವಜವನ್ನ ಯಾವಾಗ ಬೇಕು ಆವಾಗ ಹಾರಿಸಲು ಆಗುತ್ತಾ. ರಾಷ್ಟ್ರ ಧ್ವಜ ಕನ್ನಡ ಧ್ವಜ ಹನುಮ ಧ್ವಜ ಬಗ್ಗೆ ರಾಜಕಾರಣ ಮಾಡಬೇಡಿ ಎಂದರು.
ಈಗ ರಾಜ್ಯದಲ್ಲಿ 28 ಸೀಟ್ ಗೆಲ್ತಿವಿ ಅಂತಿದ್ದಾರೆ ದೇಶದಲ್ಲಿ 28 ಗೆಲ್ಲಲ್ಲಾ. ನಾನು ಸೊಕ್ಕಿನಿಂದ ಮಾತನಾಡಲ್ಲ.ಹಿಂದೂ ಮುಸ್ಲಿಂರನ್ನ (Hindu-Muslim) ಅಣ್ಣ ತಮ್ಮಂದಿರಾಗಿ ಇರಲು ಬಿಡಿ. ಇಲ್ಲಿ ನಿರ್ಮಾಣವಾದ ಎಲ್ಲಾ ಮಸೀದಿ ಬಗ್ಗೆ ನಾವು ಮಾತನಾಡಲ್ಲ. ಔರಂಗಜೇಬ ಬಂದು ಮಂದಿರಗಳ ಮೇಲೆ ಕಟ್ಟಿದ ಮಸೀದಿಗಳ ಬಗ್ಗೆ ಮಾತ್ರ ಮಾತನಾಡುತ್ತೇವೆ ಎಂದರು.
[ays_poll id=3]