This is the title of the web page
This is the title of the web page
Crime NewsLocal News

ಸೈಡ್ ನೀಡದ ವಿಚಾರಕ್ಕೆ ಗಲಾಟೆ : 29 ಮುಸ್ಲಿಂ ಯುವಕರಿಂದ ಮನೆಗೆ ನುಗ್ಗಿ ದಾಂಧಲೆ..?


K2kannadanews.in

FIR on Muslim youths ಮುದುಗಲ್ : ಕ್ರೂಸರ್​ ವಾಹನಕ್ಕೆ (vehicle) ಸೈಡ್​ ಕೊಡದ ಕಾರಣ ಹಿಂದೂಗಳ ಮನೆಗೆ (Hindu House) ನುಗ್ಗಿ ಅನ್ಯಕೋಮಿನ ಯುವಕರು ಪುಂಡಾಟ ಮೆರೆದಿರುವ ಘಟನೆ ಮುದುಗಲ್ ಪಟ್ಟಣದಲ್ಲಿ ನಡೆದಿದ್ದು ತಡವಾಗಿ (late) ಬೆಳಕಿಗೆ ಬಂದಿದೆ.

ರಾಯಚೂರು (Raichuru) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಮುದುಗಲ್​ (mudugal city) ಪಟ್ಟಣದ ಹರಿಜನವಾಡ ಬಡಾವಣೆಯಲ್ಲಿ ಇದೇ ತಿಂಗಳ 26ರ ಮಧ್ಯರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಫಿ ಎಂಬಾತ ಕ್ರೂಸರ್​ಗೆ (Cruiser Vehicle) ಸೈಡ್ ಕೊಡುವಂತೆ ಹಾರ್ನ್​ ಹಾಕಿದ್ದ, ಆದರೆ ಅರವಿಂದ ಎನ್ನುವ ಯುವಕ ಸೈಡ್ ಕೊಡಲು ತಡ ಮಾಡಿದ, ಇದೇ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗ್ತಿದೆ.

ಈ ಘಟನೆ ನಡೆದ ನಂತರ ಸುಮಾರು 30 ಯುವಕರೊಂದಿಗೆ ಮಾರಕಾಸ್ತ್ರಗಳೊಂದಿಗೆ ಆಗಮಿಸಿದ ರಫಿ ದಾಂಧಲೆ ಎಸಗಿದ್ದಾನೆ ಎಂದು ದೂರಿನಲ್ಲಿ ನಮೋದಿಸಲಾಗಿದೆ. ಸದ್ಯ 29 ಯುವಕರ ವಿರುದ್ಧ ಜಾತಿ ನಿಂದನೆ ಕೇಸ್​ ದಾಖಲಾಗಿದ್ದು, ಪೊಲೀಸರು FIR ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಮುದುಗಲ್ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.


[ays_poll id=3]