K2kannadanews.in
FIR on Muslim youths ಮುದುಗಲ್ : ಕ್ರೂಸರ್ ವಾಹನಕ್ಕೆ (vehicle) ಸೈಡ್ ಕೊಡದ ಕಾರಣ ಹಿಂದೂಗಳ ಮನೆಗೆ (Hindu House) ನುಗ್ಗಿ ಅನ್ಯಕೋಮಿನ ಯುವಕರು ಪುಂಡಾಟ ಮೆರೆದಿರುವ ಘಟನೆ ಮುದುಗಲ್ ಪಟ್ಟಣದಲ್ಲಿ ನಡೆದಿದ್ದು ತಡವಾಗಿ (late) ಬೆಳಕಿಗೆ ಬಂದಿದೆ.
ರಾಯಚೂರು (Raichuru) ಜಿಲ್ಲೆಯ ಲಿಂಗಸುಗೂರು (Lingasuguru) ತಾಲ್ಲೂಕಿನ ಮುದುಗಲ್ (mudugal city) ಪಟ್ಟಣದ ಹರಿಜನವಾಡ ಬಡಾವಣೆಯಲ್ಲಿ ಇದೇ ತಿಂಗಳ 26ರ ಮಧ್ಯರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಫಿ ಎಂಬಾತ ಕ್ರೂಸರ್ಗೆ (Cruiser Vehicle) ಸೈಡ್ ಕೊಡುವಂತೆ ಹಾರ್ನ್ ಹಾಕಿದ್ದ, ಆದರೆ ಅರವಿಂದ ಎನ್ನುವ ಯುವಕ ಸೈಡ್ ಕೊಡಲು ತಡ ಮಾಡಿದ, ಇದೇ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು ಎಂದು ಹೇಳಲಾಗ್ತಿದೆ.
ಈ ಘಟನೆ ನಡೆದ ನಂತರ ಸುಮಾರು 30 ಯುವಕರೊಂದಿಗೆ ಮಾರಕಾಸ್ತ್ರಗಳೊಂದಿಗೆ ಆಗಮಿಸಿದ ರಫಿ ದಾಂಧಲೆ ಎಸಗಿದ್ದಾನೆ ಎಂದು ದೂರಿನಲ್ಲಿ ನಮೋದಿಸಲಾಗಿದೆ. ಸದ್ಯ 29 ಯುವಕರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದ್ದು, ಪೊಲೀಸರು FIR ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಘಟನೆ ಸಂಬಂಧ ಮುದುಗಲ್ ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
[ays_poll id=3]