K2kannadanews.in
Food poison ರಾಯಚೂರು : ವಿಷಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರೂ ಮಕ್ಕಳು ಮೃತಪಟ್ಟು(children died), ಮೂವರು ಅಸ್ವಸ್ಥಗೊಂಡ (sick) ಹೃದಯ ವಿದ್ರಾವಕ ಘಟನೆ ವಡ್ಲೂರು ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು (Raichur) ತಾಲೂಕಿನ ವಡ್ಲೂರು (vadluru) ಗ್ರಾಮದಲ್ಲಿ ಘಟನೆ ನಡೆದಿದ್ದು, ಆರತಿ (arati 7), ಪ್ರಿಯಾಂಕ್ (priyank 9), ಮೃತ ದುರ್ದೈವಿ ಮಕ್ಕಳಾಗಿದ್ದು, ಹುಸೇನಮ್ಮ(35), ಮಾರುತಿ(40), ಲಕ್ಷ್ಮಣ್ (60) ಅಸ್ವಸ್ಥಗೊಂಡಿದ್ದರೆ. ಮೂಲತ ಲಿಂಗಸಗೂರು (Lingasuguru) ತಾಲೂಕಿನ ಕಮಲದಿನ್ನಿ ಗ್ರಾಮದ ನಿವಾಸಿಗಳು. ಕೂಲಿ ಕೆಲಸಕ್ಕೆಂದು ವಡ್ಲೂರು ಗ್ರಾಮಕ್ಕೆ ಬಂದಿದ್ದರು. ಬ್ರಿಕ್ಸ್ (Brick’s) ತಯಾರಿಕೆ ಘಟಕದಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ರಜೆ (holiday) ನಿಮಿತ್ತ ಪೋಷಕರ (parents) ಬಳಿ ಇಬ್ಬರು ಮಕ್ಕಳು ಬಂದಿದ್ದರು.
ಇನ್ನೂ ರಾತ್ರಿ ಊಟಕ್ಕೆ (dinner) ಚಪಾತಿ, ಹೆಸರಕಾಳು, ಅನ್ನ, ಸಾಂಬಾರು ಸೇವಿಸಿದ್ದ ಮಕ್ಕಳು ಸೇರಿ ಕುಟುಂಬಸ್ಥರ ಆರೋಗ್ಯದಲ್ಲಿ ಏಕಾಏಕಿ ಏರುಪೇರು ಕಂಡಿದೆ. ಕೂಡಲೇ ಮಕ್ಕಳನ್ನು ರಿಮ್ಸ್ (RIMS hospital) ಆಸ್ಪತ್ರೆಗೆ ಕರೆ ತರಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮಕ್ಕಳು ಹಸುನೀಗಿದ್ದಾರೆ. ಇನ್ನೂ ಮೂರು ಅಸ್ವಸ್ಥರಿಗೆ ಚಿಕಿತ್ಸೆ ಮುಂದುವರೆದಿದೆ.
[ays_poll id=3]