K2 ನ್ಯೂಸ್ ಡೆಸ್ಕ್ : ಸೇಬು(apple) ತುಂಬಿದ್ದ ಲಾರಿ(lorry) ಅಪಘಾತಕ್ಕೊಳಗಾಗಿ ಪಲ್ಟಿಯಾಗಿ ಹಣ್ಣುಗಳು ರಸ್ತೆಗೆ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ನಾ ಮುಂದು ತಾಮುಂದು ಅಂತ ಕ್ಷಣಮಾತ್ರದಲ್ಲಿ ಒಂದು ಲಾರಿ ಹಣ್ಣುಗಳು ಖಾಲಿ ಮಾಡಿದ ಘಟನೆ ಜರುಗಿದೆ.
ವಿಜಯನಗರ(Vijayanagara) ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದ ಬಳಿ ರಾಜಸ್ಥಾನ(Rajasthan) ಮೂಲದ ಲಾರಿ ಅಪಘಾತಕ್ಕೆ ಒಳಗಾಗಿತ್ತು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಇಳಿದ ಲಾರಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಹಣ್ಣು ರಸ್ತೆಗೆ ಬಿದ್ದಿದೆ. ಘಟನೆ ನೋಡಲು ಬಂದ ಜನ, ನಾ ಮುಂದು ತಾ ಮುಂದು ಎಂದು ರಸ್ತೆಗೆ ಬಿದ್ದಿದ್ದ ಸೇಬು ಹಣ್ಣುಗಳನ್ನು ಹೊತ್ತೊಯ್ದಿದ್ದಾರೆ. ಪೋಲಿಸರಿಗೂ(police) ಕ್ಯಾರೆ ಎನ್ನದೆ ಸೇಬು ಹಣ್ಣುಗಳನ್ನು ಒತ್ತೊಯ್ದಿದ್ದಾರೆ. ಜನರನ್ನು ನಿಯಂತ್ರಿಸಲಾಗದೆ, ಅಸಹಾಯಕರಾಗಿ ನಿಂತಿದ್ದರು ಪೊಲೀಸರು. ಕ್ಷಣಮಾತ್ರದಲ್ಲೇ ಸೇಬು ಹಣ್ಣಿನ ಲೋಡನ್ನೇ ಖಾಲಿ ಮಾಡಿದ ಜನ.
[ays_poll id=3]