This is the title of the web page
This is the title of the web page
Crime NewsVideo News

ಪತ್ನಿಗೆ ಮೆಸೇಜ್ ಹಾಕಿದ ವಿಚಾರಕ್ಕೆ : ಪತಿಯಿಂದ ಮುಸ್ಲಿಂ ಯುವಕನ ಕೊಲೆ..?

Oplus_131072

K2kannadanews.in

Murder News ಮಸ್ಕಿ : ಪತ್ನಿಗೆ ಮೆಸೇಜ್ (massage to wife) ಮಾಡ್ತಿದ್ದಕ್ಕೆ ಮುಸ್ಲೀಂ ಯುವಕನ್ನು ಆಂಜನೇಯನ ದೇವಸ್ಥಾನದ (Temple) ಪೂಜಾರಿಯೇ ಭೀಕರವಾಗಿ ಹತ್ಯೆ (Murder) ಮಾಡಿದ ಘಟನೆ ತುಗ್ಗಲದಿನ್ನಿ ಗ್ರಾಮದ ಬಳಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲ್ಲೂಕಿನ ಬಳಗಾನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಪತ್ನಿ‌ (Wife) ಮೇಲೆ ಕಣ್ಣು ಹಾಕಿದ್ದ, ಅಲ್ಲದೇ ಪತ್ನಿಗೆ ಮೆಸೆಜ್ ಮಾಡುತ್ತಿದ್ದ ಎಂಬ ಕಾರಣಕ್ಕೆ ಆಂಜನೇಯನ ದೇವಸ್ಥಾನದ ಪೂಜಾರಿ ಮಾರುತಿ ಅದೇ ಗ್ರಾಮದ ಖಾದರ್ ಭಾಷಾ (khadar bhasha 28)ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ‌ ಮಾಡಿದ ಆರೋಪಿ ಮಾರುತಿ (Maruti) ಕೊಲೆಗೈದು ತಾನೇ ಖುದ್ದಾಗಿ ಠಾಣೆಗೆ ಬಂದು ಶರಣಾಗತಿ (Serenader) ಆಗಿದ್ದಾನೆ ಎನ್ನಲಾಗುತ್ತಿದೆ.

ಇಬ್ಬರೂ ಮಸ್ಕಿ ತಾಲ್ಲೂಕಿನ ಬಳಗಾನೂರು ಗ್ರಾಮದ ನಿವಾಸಿಗಳಾಗಿದ್ದು, ಬೆಳಗಿನ ಜಾವ 9 ಗಂಟೆಗೆ ದುರ್ಘಟನೆ ನಡೆದಿದೆ. ಕೊಲೆಯಲ್ಲಿ 6 ರಿಂದ 7 ಜನ ಭಾಗಿಯಾಗಿರುವ ಶಂಕೆಯಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಕೊಲೆಯಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಭೇಟಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ತನಿಖೆಯನ್ನು ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.


[ays_poll id=3]