This is the title of the web page
This is the title of the web page
Crime NewsLocal NewsState News

ಕುಡಿಯಲು ಹಣ ನೀಡಲು ನಿರಾಕರಿಸಿದ ಪತ್ನಿಯನ್ನು ಕೊಂದ ಪತಿ


K2kannadanews.in

ಲಿಂಗಸುಗೂರು : ಕುಡಿತದ ಚಟಕ್ಕೆ(Addiction to alcohol) ಬಿದ್ದ ಪತಿ(husband) ಕುಡಿಯಲು ಹಣ(money) ನೀಡಲು ನಿರಾಕರಿಸಿದ ಕಾರಣಕ್ಕೆ ಪತ್ನಿಯನ್ನೇ ಪತಿ(wife) ಕೊಂದ ಘಟನೆ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ನಡೆದಿದೆ.

ಹೌದು ರಾಯಚೂರು(Raichur) ಜಿಲ್ಲೆ ಲಿಂಗಸುಗೂರು(lingasuguru) ತಾಲ್ಲೂಕಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಸುನೀತಾ(sunita) (28) ಹಲ್ಲೆಯಲ್ಲಿ ಮೃತಪಟ್ಟ ದುರ್ದೈವಿ. ಬಸವರಾಜ್ (basavaraj) ಪತ್ನಯನ್ನು ಕೊಂದ ಆರೋಪಿ. ಸುನಿತಾ ಮತ್ತು ಬಸವರಾಜ್ 2014 ರಲ್ಲಿ ಪ್ರೀತಿಸಿ ಲಿಂಗಸುಗೂರು ರಿಜಿಸ್ಟ್ರಾರ್ ಕಛೇರಿಯಲ್ಲಿ ಮದುವೆಯಾಗಿದ್ದರು (married). ಕೆಲ ದಿನಗಳ ನಂತರ ಬಸವರಾಜ್ ಕುಡಿತದ ಚಟಕ್ಕೆ ಬಿದ್ದು ಪತ್ನಿಗೆ ಹಣಕ್ಕಾಗಿ ಪೀಡಿಸುತ್ತಿದ್ದ. ಇದೇ ವಿಚಾರಕ್ಕೆ ಪತಿ ಪತ್ನಿ ನಡುಗೆ ಜಗಳವಾಗಿದೆ(fight) ಇದೆ ಕೋಪದಲ್ಲಿ, ಸುನಿತಾ ತಮ್ಮ ಹೊಲದಲ್ಲಿ ಶೇಂಗಾ ಬೆಳೆಗೆ ನೀರು ಕಟ್ಟುತ್ತಿದ್ದಾಗ, ಪತಿ ಬಸವರಾಜ್ ಹೊಲದಲ್ಲಿದ್ದ ಸಲಿಕೆಯಿಂದ ಪತ್ನಿ ಬಲಕಣ್ಣಿಗೆ ಹೊಡೆದಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವ ಆಗಿ ಸುನಿತ ಮೃತಪ್ಟಿದ್ದಾಳೆ.

ಘಟನೆಗೆ ಸಂಬಂದಿಸಿದಂತೆ ಸುನಿತಾಳ ತಂದೆ ಲಿಂಗಸುಗೂರು ಠಾಣೆಯಲ್ಲಿ ಪತಿ ಬಸವರಾಜ್ ಸೇರಿ ದೇವಪ್ಪ, ದ್ಯಾಮಮ್ಮ, ಶಿವಪುತ್ರಪ್ಪ ವಿರುದ್ಧ ದೂರು ದಾಖಲಿಸಿದ್ದಾರೆ. ಕೊಲೆಯಾದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮಾಹಿತಿ ಪಡೆದು, ಪರಾರಿಯಾದ ಪತಿ ಬಸವರಾಜ್ ಬಂದನಕ್ಕೆ ಜಾಲ ಬೀಸಿದ್ದಾರೆ.


[ays_poll id=3]