K2kannadanews.in
ಮುದುಗಲ್ : ಭತ್ತದ ಹುಲ್ಲು(pady) ತುಂಬಿಕೊಂಡು ಹೊರಟಿದ್ದ ಟ್ರ್ಯಾಕ್ಟರ್(tractor) ಮೇಲೆ ವಿದ್ಯುತ್ ಕಂಬ(electricity pole) ಬಿದ್ದ ಅನಾಹುತ(incident) ಒಂದು ತಪ್ಪಿದ ಘಟನೆ ಮುದುಗಲ್(mudugal) ಪಟ್ಟಣದಲ್ಲಿ ಜರುಗಿದೆ.
ಹೌದು ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು(lingasuguru) ತಾಲೂಕಿನ ಮುದಗಲ್ ಪಟ್ಟಣದಲ್ಲಿ ಜರುಗಿದೆ. ಪಟ್ಟಣದ ಮುಖ್ಯ ರಸ್ತೆಯಲ್ಲಿ(main road) ಭತ್ತದ ಹುಲ್ಲು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಪೋಲ್ ಬಿದ್ದದೆ. ಅದೃಷ್ಟವಶಾತ್(Fortunately) ವಿದ್ಯುತ್ ಪ್ರವಹಿಸುತ್ತಿದ್ದರು ಬೆಂಕಿ(fire) ಹೊತ್ತಿಕೊಂಡಿಲ್ಲ. ಕೂಡಲೆ ಜೆಸ್ಕಾ(jecom) ಅಧಿಕಾರಿಗಳಿಗೆ ಮಾಹಿತಿ ನೀಡಿದ ಸಾರ್ವಜನಿಕರು ವಿದ್ಯುತ್ ಕಡಿತ ಮಾಡಿಸಿದ್ದಾರೆ. ಟ್ರ್ಯಾಕ್ಟರ್ ನಲ್ಲಿ 8 ಜನ ರೈತರು(farmars) ಇದ್ದು ಭಾರಿ ಅನಾಹುತ ಒಂದು ತಪ್ಪಿದಂತಾಗಿದೆ. ಮುದುಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಆರು ತಿಂಗಳ(6 months back) ಹಿಂದೆ ರಸ್ತೆ ವಿಭಜಕ ಕಾಮಗಾರಿ(road divider work) ಮಾಡಿ ವಿದ್ಯುತ್ ಕಂಬಗಳನ್ನು ಹಾಕಲಾಗಿದೆ. ಇಲ್ಲಿ ನಡೆದ ಕಳಪೆ(poor) ಕಾಮಗಾರಿಯಿಂದ ವಿದ್ಯುತ್ ಕಂಬಗಳು ಸಣ್ಣ ಪ್ರಮಾಣದ ಗಾಳಿಗೆ ನೆಲಕ್ಕುರುಳುತ್ತಿವೆ, ಕೆಲ ದಿನಗಳ ಹಿಂದೆ ಗಾಳಿಗೆ ನಾಲ್ಕು ವಿದ್ಯುತ್ ಕಂಭಗಳು ನೆಲಕ್ಕೆ ಉರುಳಿದ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಈ ಘಟನೆ ಜರುಗಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸಲು ಆತಂಕ ಪಡುವಂತಾಗಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
[ays_poll id=3]