ರಾಯಚೂರು : ನಿರ್ಮಾಣ ಹಂತದ ಮನೆ ಮೇಲಿಂದ ಬಿದ್ದು ಯುವಕ ನೂತ ಪಟ್ಟ ಘಟನೆ ನಗರದ ತಿಮ್ಮಾಪುರ ಪೇಟೆ ಬಡಾವಣೆಯಲ್ಲಿ ಜರುಗಿದೆ.
ರಾಯಚೂರು ನಗರದ ತಿಮ್ಮಾಪುರ ಪೇಟೆ ಬಡಾವಣೆಯಲ್ಲಿ ರಾತ್ರಿ ವೇಳೆ ಮನೆಯ ಮೇಲೆ ಮಲಗಿದ್ದ ಯುವಕ ರಮೇಶ್(19) ಬೆಳಗಾಗುವ ವೇಳೆಗೆ ಮನೆಯ ಪಕ್ಕದಲ್ಲಿ ಇದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ರಾಯಚೂರಿನ ಭರತ ನಗರದ ನಿವಾಸಿಯಾದ ರಮೇಶ್ ಪಿಯುಸಿ ಮುಗಿಸಿ ಗಾರೆ ಕೆಲಸ ಮಾಡುತ್ತಿದ್ದ, ಗಣೇಶ ಹಬ್ಬದ ಹಿನ್ನೆಲೆ ಸ್ನೇಹಿತನ ಮನೆಗೆ ಬಂದಿದ್ದ, ಇವೆಲ್ಲ ಸ್ನೇಹಿತರೊಂದಿಗೆ ಮನೆಯ ಮೇಲೆ ಮಲಗಿದ್ದು, ಬೆಳಗಾಗುವ ಬೇಳೆ ಮನೆಯ ಪಕ್ಕದಲ್ಲಿ ಇದ್ದ ಕಟ್ಟಡದಲ್ಲಿ ಶವಪಾಗಿ ಬಿದ್ದಿದ್ದ. ಸ್ಥಳಕ್ಕೆ ನೇತಾಜಿ ನಗರ ಪೊಲೀಸರು ಭೇಟಿ ಪರಿಶೀಲನೆ ಮಾಡಿ, ಮರಣೋತ್ತರ ಪರೀಕ್ಷೆಗಾಗಿ ನಗರದ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.
[ays_poll id=3]