This is the title of the web page
This is the title of the web page
Crime NewsState NewsVideo News

ಸಿಂಧನೂರಿನಲ್ಲಿ ಭೀಕರ ಅಪಘಾತ, ಸ್ಥಳದಲ್ಲೆ ನಾಲ್ವರ ದುರ್ಮರಣ


K2kannadanews.in

ಸಿಂಧನೂರು : ಟಾಟಾ ಎಸ್(Tata ace) ಮತ್ತು ಲಾರಿ(lorry) ನಡುವೆ ಭೀಕರ ಅಪಘಾತ(accident) ಸಂಭವಿಸಿ ನಾಲ್ವರು ಸಾವನ್ನಪ್ಪಿದ(Four died) ಘಟನೆ ಪಗಡದಿನ್ನಿ ಕ್ಯಾಂಪ್(pagad dinni camp) ಬಳಿ ನಡೆದಿದೆ.

ರಾಯಚೂರು ಜಿಲ್ಲೆಯ ಸಿಂಧನೂರು (sindhanuru) ಮತ್ತು ಮಸ್ಕಿ(maski) ಮಾರ್ಗದ ಮದ್ಯದಲ್ಲಿರುವ ಪಗಡದಿನ್ನಿ ಕ್ಯಾಂಪ್ ಬಳಿ ಅಪಘಾತ ನಡೆದಿದ್ದು, ಮುಂದೆ ಹೋಗುತ್ತಿದ್ದ ಗಾಡಿ ಓವರ್ ಟೇಕ್(over take) ಮಾಡಲು ಹೋಗಿ, ಮದುವೆ ಡೆಕೋರೇಟ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಟಾಟಾ ಏಸ್ ಲಾರಿಗೆ ಡಿಕ್ಕಿ ಹೋಡೆದಿದೆ. ಅಪಘಾತದಲ್ಲಿ ಇಸ್ಮಾಯಿಲ್(25), ಚನ್ನಬಸವ (26), ಅಂಬರೀಶ್ (20), ಹಾಗೂ ರವಿ (21) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಇನ್ನು ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ(treatment) ಸಿಂಧನೂರು ತಾಲೂಕ ಆಸ್ಪತ್ರೆಗೆ(hospital) ರವಾನಿಸಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಪೋಲೀಸರು(police) ಪರಿಶೀಲನೆ ಮಾಡಿ ಮಾಹಿತಿ ಕಲೆ ಹಾಕಲಾಗುತ್ತಿದ್ದಾರೆ. ಮೃತದೇಹಗಳನ್ನು ಶವ ಪರೀಕ್ಷೆಗಾಗಿ ಸಿಂಧನೂರು ಶವಗಾರಕ್ಕೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಂಧನೂರು ಗ್ರಾಮೀಣ ಠಾಣೆಯಲ್ಲಿ(rural police station) ಪ್ರಕರಣ ದಾಖಲಾಗಿದೆ.


[ays_poll id=3]