K2kannadanews.in
ರಾಯಚೂರು : ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿ ವಿಶ್ವವಿದ್ಯಾಲಯ(Raichur university) ಆವರಣದಲ್ಲಿ ಕಟ್ಟಡದಿಂದ(building) ಹಾರಿ ಆತ್ಯಹತ್ಯೆಗೆ(suicide) ಯತ್ನಿಸಿದ(attempt) ಘಟನೆ ಜರುಗಿದೆ.
ಹೌದು ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದ ಬಳಿಯಿರುವ ರಾಯಚೂರು ವಿಶ್ವವಿದ್ಯಾಲಯದಲ್ಲಿ ಘಟನೆ ನಡೆದಿದೆ. ನಾಲ್ಕನೇ ಸೆಮಿಸ್ಟರ್(4th semester) ಸ್ನಾತಕೋತ್ತರ(PG) ಪದವಿ, ರಸಾಯನಶಾಸ್ತ್ರ(chemistry) ಪರೀಕ್ಷೆ(exam) ಬರೆಯುತ್ತಿದ್ದ ವೇಳೆ, ಪರೀಕ್ಷೆಯಲ್ಲಿ ನಕಲು(copy) ಮಾಡುವಾಗ ಕೊಠಡಿ ಮೇಲ್ವಿಚಾರಕರ ಕೈ ಸಿಕ್ಕಿಬಿದ್ದ ವಿದ್ಯಾರ್ಥಿನಿ. ಒಟ್ಟು ಐದು ವಿದ್ಯಾರ್ಥಿಗಳು ಪರೀಕ್ಷಾ ನಕಲು ಮಾಡುವಾಗ ಸಿಕ್ಕಿಬಿದ್ದರು. ಆ ಕಾರಣಕ್ಕೆ ವಿದ್ಯಾರ್ಥಿಗಳನ್ನು ಎಂ.ಪಿ.ಸಿ(MPC) ಮಾಡಲಾಗಿದೆ. ಇದರಿಂದ ನೊಂದ ವಿದ್ಯಾರ್ಥಿನಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಮೇಲಿಂದ ಬಿದ್ದ ರಭಸಕ್ಕೆ ವಿದ್ಯಾರ್ಥಿನಿ ಬೆನ್ನು, ತಲೆ ಭಾಗಕ್ಕೆ ಬಲವಾದ ಪಟ್ಟು ಬಿದ್ದಿದ್ದು ರಾಯಚೂರು ನಗರದ ಖಾಸಗಿ ಆಸ್ಪತ್ರೆಗೆ(hospital) ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ವಿವಿ ಕುಲಪತಿ(vc) ಡಾ.ಹರೀಶ್ ರಾಮಸ್ವಾಮಿ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯ ಆರೋಗ್ಯ ವಿಚಾರಣೆ ನಡೆಸಿದರು. ಘಟನೆಯು ಯರಗೇರಾ ಪೊಲೀಸ್ ಠಾಣಾ(yaragera police station) ವ್ಯಾಪ್ತಿಯಲ್ಲಿ ಜರುಗಿದೆ.
[ays_poll id=3]