This is the title of the web page
This is the title of the web page
Crime NewsLocal News

ತಂದೆಯ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಂದ ಮಗ


ಲಿಂಗಸುಗೂರು : ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ ತಂದೆಯನ್ನು ಮಗನೇ ತಲೆ ಮೇಲೆ ಕಲ್ಲು ಎತ್ತಿ ಹಾಕಿ ತಂದೆ ಹತ್ಯೆಗೈದ ಘಟನೆ ದೇವರಭೂಪೂರು ಗ್ರಾಮದಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ದೇವರಭೂಪೂರಿನಲ್ಲಿ ಘಟನೆ‌ ನಡೆದಿದ್ದು, ಗಾಂಜಾ, ಮದ್ಯ ಸೇವಿಸಿ ತಾಯಿಗೆ ನಿತ್ಯ ಕಿರುಕುಳ ನೀಡುತ್ತಿದ್ದ, ಇದರಿಂದ ಬೇಸತ್ತ ಮಗ ತಂದೆಯನ್ನು ಕೊಂದಿದ್ದಾನೆ. ಬಂಡಿ ತಿಮ್ಮಣ್ಣ (55) ಕೊಲೆಯಾದ ತಂದೆ. ಶೀಲವಂತ (32) ಕೊಲೆಗೈದ ಆರೋಪಿ ಮಗ. ತಂದೆಯನ್ನು ಕೊಂದು ತಾನೇ 112 ಪೊಲೀಸರಿಗೆ ಕರೆ ಮಾಡಿ‌ ಮಾಹಿತಿ. ಮೊದಲು ತಂದೆ ಕೊಲೆಗೈದು ಪ್ರಕರಣ‌ ಮುಚ್ಚಿ ಹಾಕಲು ಯತ್ನಿಸಿದ್ದಾನೆ. ಮನೆಯ ಹೊರಗಡೆ ಹೊಡೆದು ಬಳಿಕ ಮನೆಯೊಳಗೆ ಮೃತದೇಹ ಎಳೆದೊಯ್ದು ಸಾಕ್ಷಿ ನಾಶಕ್ಕೆ ಯತ್ನಿಸಿದ ಆರೋಪಿ ಮಗ.

ಮೃತದೇಹ ತೀವ್ರ ರಕ್ತಸಿಕ್ತವಾಡಧ್ದರಿಂದ ಅನಿವಾರ್ಯವಾಗಿ ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿ. ನಿತ್ಯ ಕುಡಿದು ಬಂದು ತಾಯಿಗೆ ಹಾಗೂ ಕುಟುಂಬಸ್ಥರಿಗೆ ಕಿರುಕುಳ ನೀಡುತ್ತಿದ್ದ ಮೃತ ತಿಮ್ಮಣ್ಣ. ತಾಯಿ ನೋವು ಸಹಿಸಲಾಗದೇ ತಂದೆ ಹತ್ಯೆಗೈದ ಮಗ. ಸ್ಥಳಕ್ಕೆ ಲಿಂಗಸುಗೂರು ಪೊಲೀಸರ ಭೇಟಿ,ಪರಿಶೀಲನೆ..


[ays_poll id=3]