https://youtu.be/CSak-Ox8_vE?si=vwk8T31fwYpjFDMn
ಶವ ಸಂಸ್ಕಾರ ಮುಗಿಸಿ ವಾಪಸಾಗುತ್ತಿದ್ದ ವೇಳೆ ಟಾಟಾ ಎಸ್ ವಾಹನ ಪರ್ಟಿಯಾಗಿ 15 ಜನ ಗಾಯಗೊಂಡ ಘಟನೆ ಆನೆ ಹೊಸೂರು ಗ್ರಾಮದ ಬಳಿ ಜರುಗಿದ ಅದೃಷ್ಟವಶಾತ್ ಯಾವುದೇ ಸಂಭವಿಸಿಲ್ಲ.
ಲಿಂಗಸಗೂರು ತಾಲೂಕಿನ ಆನೆಹೊಸೂರು ಗ್ರಾಮದ ಸಮೀಪ ಶವ ಸಂಸ್ಕಾರ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಾಹನ ಪಲ್ಟಿಯಾದ ಪರಿಣಾಮ ಸುಮಾರು 15 ಮಂದಿ ಸಣ್ಣಪುಟ್ಟ ಗಾಯಗೊಂಡ ಘಟನೆ ನಡೆದಿದೆ. ಮಂಗಳವಾರ 2 ಗಂಟೆಗೆ ಚಿತ್ತಾಪುರದಿಂದ ಲಿಂಗಸಗೂರಿಗೆ ಅಂತ್ಯಕ್ರಿಯೆಗಾಗಿ ಬಂದಿದ್ದವರು ಮುಗಿಸಿಕೊಂಡು ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಉರುಳಿದೆ ಎನ್ನಲಾಗಿದೆ. ಗಾಯಗೊಂಡವರನ್ನು ತಕ್ಷಣ ಸ್ಥಳೀಯರು ಲಿಂಗಸಗೂರು ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.