https://youtu.be/qqdgFq9SoBk?si=Dzw5Dnyjw1EcgtXX
ಬೇಸಿಗೆ ಶಕೆ ಎಂದು ನೀವು ಹೊರಗಡೆ ಮಲಗ್ತೀರಾ? ಹಾಗಾದ್ರೆ ಹಾಗೆ ಮನೆಯ ಮುಂದೆ ಮಲಗುವ ಮುನ್ನ ಎಚ್ಚರ.. ಯಾಕಂದ್ರೆ ಇಲ್ಲೊಬ್ಬ ಮಹಿಳೆಗೆ ಮನೆ ಮುಂದೆ ನೆಮ್ಮದಿಯಾಗಿ ಮಲಗಿ ನಿದ್ರೆ ಮಾಡ್ತಿದ್ದಾಗ ಬೃಹತ್ ಗಾತ್ರದ ಹಾವೊಂದು ಬಂದು ಸದ್ದಿಲ್ಲದೇ ಕಚ್ಚಿ ಮಾಯವಾಗಿದೆ. ಹಾವು ಕಚ್ಚಿ ಹೋಗುವ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ರಾಯಚೂರು ಜಿಲ್ಲೆ ಹೇಳಿ ಕೇಳಿ ಮೊದಲೇ ಬಿಸಿಲೂರು. ರಾಜ್ಯದಲ್ಲಿಯೇ ಅತಿ ಹೆಚ್ಚು ತಾಪಮಾನ ದಾಖಲಾಗುವ ಜಿಲ್ಲೆ. ಹೀಗಾಗಿ ಇಲ್ಲಿನ ಜನ ಮನೆಯೊಳಗೆ ಕೂತರೂ ಶಕೆ. ಹೊರಗಡೆ ಓಡಾಡಿದರೂ ಶಕೆ. ಹೀಗಾಗಿ ಜನ ರಾತ್ರಿಯಾದರೆ ಗಾಳಿ ಬಯಸಿ ಮನೆಯ ಹೊರಗಡೆ ಬಂದು ಮಲಗ್ತಾರೆ. ಹಾಗೆ ಸಿಂಧನೂರು ತಾಲ್ಲೂಕಿನ ಉಮಲೂಟಿ ಗ್ರಾಮದ ಯಲ್ಲಮ್ಮ ಎಂಬ ಮಹಿಳೆ ನಿನ್ನೆ ರಾತ್ರಿ ಊಟ ಮಾಡಿ ಮನೆಯ ಹೊರಗಡೆ ಬಂದು ಬೆಚ್ಚಗೆ ಮಲಗಿದಾಳೆ. ಸಮಯ ರಾತ್ರಿ 8:15 ನಿಮಿಷ ಆಗಿರಬಹುದು.ಕಪ್ಪೆಯನ್ನು ಅಟ್ಟಿಸಿಕೊಂಡು ಬಂದ ಬೃಹತ್ ಗಾತ್ರದ ಹಾವೊಂದು ವೇಗವಾಗಿ ಬಂದು ಮಲಗಿದ್ದ ಯಲ್ಲಮ್ಮಳ ಕಚ್ಚಿ ಹೋಗಿದೆ.
ಯಾವುದೋ ಹುಳವೊಂದು ಕಾಲಿಗೆ ಕಚ್ಚಿದೆ ಅನ್ನೋದು ಯಲ್ಲಮ್ಮಳ ಅರಿವಿಗೆ ಬಂದಿದೆ. ಆದ್ರೆ ಹಾವೇ ಕಚ್ಚಿದೆ ಅನ್ನೋದು ತತ್ ಕ್ಷಣಕ್ಕೆ ಯಲ್ಲಮ್ಮಳಿಗೆ ಗೊತ್ತಾಗಿಲ್ಲ. ಆದ್ರೆ ಹೀಗೆ ಏನೋ ನನ್ನ ಕಾಲಿಗೆ ಕಡಿದಿದೆ ಅಂತ ಮನೆಯವರಿಗೆ ತಿಳಿಸಿದಾಳೆ. ಆಗ ಮನೆಯವ್ರು ಸಿಸಿ ಕ್ಯಾಮರ ಚೆಕ್ ಮಾಡಿದಾಗ ಬೃಹತ್ ಗಾತ್ರದ ಹಾವೊಂದು ಯಲ್ಲಮ್ಮಳ ಕಾಲಿಗೆ ಕಚ್ಚಿರೋದು ಗೊತ್ತಾಗಿದೆ. ಕೂಡಲೇ ಯಲ್ಲಮ್ಮಳನ್ನು ಸಿಂಧನೂರು ಖಾಸಗೀ ಆಸ್ಪತ್ರೆಗೆ ದಾಖಲಿಸಿದಾರೆ. ಬೇಗ ಚಿಕಿತ್ಸೆ ದೊರೆತಿರೋದ್ರಿಂದ ಯಲ್ಲಮ್ಮ ಪ್ರಾಣಾಪಾಯದಿಂದ ಪಾರಾಗಿದಾಳೆ.
ಬೇಸಿಗೆ ಬೇಗೆ ರಾಯಚೂರಲ್ಲಿ ಏನೆಲ್ಲಾ ಅವಾಂತರಗಳಿಗೆ ಕಾರಣ ಆಗುತ್ತೆ ಅನ್ನೋದನ್ನ ನೋಡಿದ್ರಲ್ಲ. ಏನೇ ಆದರೂ ಗ್ರಾಮೀಣ ಭಾಗದಲ್ಲಿ ಮನೆಯ ಹೊರಗಡೆ ಮಲಗುವ ಜನ ಇಂತಹ ವಿಷಜಂತುಗಳ ವಿಚಾರದಲ್ಲಿ ಎಚ್ಚರ ವಹಿಸೋದು ಉತ್ತಮ.