This is the title of the web page
This is the title of the web page
Local NewsState News

ಶಾಸಕ ಮಾನಪ್ಪ ವಜ್ಜಲ್ ದ್ವಿತೀಯ ಪುತ್ರ ಹೃದಯಾಘಾತದಿಂದ ಸಾವು..


K2kannadanews.in

ರಾಯಚೂರು : ಲಿಂಗಸುಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಅವರ ಪುತ್ರ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಲಿಂಗಸೂಗುರು ಶಾಸಕ ಮಾನಪ್ಪ ವಜ್ಜಲ್ ಅವರ ದ್ವಿತೀಯ ಪುತ್ರ ಹೃದಯಘಾತದಿಂದ ಶ್ರೀಮಂತರಾಯ ವಜ್ಜಲ್(33) ಅವರು ಇಹಲೋಕ ತ್ಯಜಿಸಿದ್ದಾರೆ. ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇನ್ನೂ ಲಿಂಗಸೂಗುರಿನ ಜಮೀನಿನಲ್ಲಿ ನಾಳೆ ಮಧ್ಯಾಹ್ನ 2 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಶ್ರೀಮಂತರಾಯ ವಜ್ಜಲ್ ನಿಧನಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು, ಕ್ಷೇತ್ರದ ಜನತೆ ಕಂಬನಿ ಮಿಡಿದಿದ್ದಾರೆ. ಶ್ರೀಮಂತರಾಯ ಕ್ಷೇತ್ರದ ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸುತ್ತಿದ್ದರು. ಮೃತರಿಗೆ ಓರ್ವ ಪುತ್ರ, ಪತ್ನಿ, ಸಹೋದರರು, ತಂದೆ, ತಾಯಿ, ಸೇರಿದಂತೆ ಅಪಾರ ಬಂಧು ಬಳಗದಿಂದ ಅಗಲಿದ್ದಾರೆ.


[ays_poll id=3]