This is the title of the web page
This is the title of the web page
Crime News

ಪೇಪರ್​ ಶೆಡ್​​ ನಲ್ಲಿ ವಾಸಿಸುತ್ತಿದ್ದ ವೃದ್ದನ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ


K2 ಕ್ರೈಂ ನ್ಯೂಸ್ : ನೈಸ್​ ರಸ್ತೆ ಬಳಿ ವಾಸಿಸುತ್ತಿದ್ದ ಅನಾಥ ವೃದ್ದನ ತಲೆಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಿದ ಅಮಾನವೀಯ ಘಟನೆ ಘಟನೆ ನೈಸ್ ರಸ್ತೆ ಬಳಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲಮಂಗಲದ ನೈಸ್ ರಸ್ತೆ ಬಾಯ್ ಘಟನೆ ನಡೆದಿದ್ದು, ಅಂಚೆಪಾಳ್ಯದ ನರಸಿಂಹಯ್ಯ(85) ಮೃತ ದುರ್ದೈವಿಯಾಗಿದ್ದಾನೆ. ಸಾವನ್ನಪ್ಪಿದ ನರಸಿಂಹಯ್ಯ ಅನಾಥವಾಗಿ ರಸ್ತೆ ಪಕ್ಕದಲ್ಲಿ ಜೀವನ ನಡೆಸುತ್ತಿದ್ದ. ನೈಸ್​ ರಸ್ತೆ ಬಳಿ ಒಂದು ಚಿಕ್ಕದಾದ ಪೇಪರ್​ ಶೆಡ್​​ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ.

ವೃದ್ದನ ಮೇಲೆ ದಿಢೀರ್​‌ಆಗಿ ಕಲ್ಲು ಎತ್ತುಹಾಕಿದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಕುರಿತು ಲಾರಿ ಚಾಲಕ ನೀಡಿದ ದೂರಿನ ಮೇರೆಗೆ ಮಾದನಾಯಕನ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರಿಗಾಗಿ ಬಲೆ ಬೀಸಿದ್ದಾರೆ. ಇನ್ನೂ ಯಾವ ಕಾರಣಕ್ಕಾಗಿ ಈ ದುಷ್ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿಲ್ಲ.


[ays_poll id=3]