ಮಾನ್ವಿ : ಸಚಿವ ಎನ್ಎಸ್ ಬೋಸರಾಜ್ ಅವರ ಬೆಂಬಲಿಗನನ್ನು ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ನಿಖಿಲ್ ಬಿ. ಹಳೆಯ ದ್ವೇಷದ ಹಿನ್ನೆಲೆ ಪ್ರಸಾದ್ ರನ್ನು ಹತ್ಯೆ ಮಾಡಲಾಗಿದೆ ಎಂದು 12 ಜನರ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಸಾದ್ನ ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ. 12 ಶಂಕಿತರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚಲು ನಾವು ಮೂವರ ತಂಡವನ್ನು ರೂಪಿಸಿದ್ದೇವೆ. ಹಳೆಯ ದ್ವೇಷದ ಕಾರಣಕ್ಕಾಗಿ ಪ್ರಸಾದ್ ಅವರನ್ನು ಹತ್ಯೆಗೈದಿರುವುದಾಗಿ ಶಂಕಿಸಲಾಗಿದೆ” ಎಂದು ಪೊಲೀಸ್ ಅಧೀಕ್ಷಕ ನಿಖಿಲ್ ಹೇಳಿದ್ದಾರೆ.
[ays_poll id=3]