K2kannadanews.in
heart attack ರಾಯಚೂರು : ಶ್ರೀಶೈಲಕ್ಕೆ (srishila) ಪಾದಯಾತ್ರೆ ಹೊರಟಿದ್ದ ಯುವಕ (Young man) ವಿಶ್ರಾಂತಿ (Rest) ಕುಳಿತ ಸ್ಥಳದಲ್ಲೇ ಹೃದಯಾಘಾತವಾಗಿ (heart attack) ಸಾವನ್ನಪ್ಪಿದ (Died) ಘಟನೆ ಚಿಕ್ಕ ಕೊಟ್ನೆಕಲ್ ಗ್ರಾಮದ ಬಳಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಚಿಕ್ಕ ಕೊಟ್ನೆಕಲ್ ಬಳಿ ಘಟನೆ ನಡೆದಿದ್ದು, ಮೃತ ಯುವಕನ್ನ ಬಾಗಲಕೋಟೆ (Bagalkote) ಮೂಲದ ಶ್ರೀಶೈಲ (srishail 22) ಎಂದು ಗುರುತಿಸಲಾಗಿದೆ. ಸೋಮವಾರ (Monday) ಮನೆಯಿಂದ ಶ್ರೀಶೈಲ ಪಾದಯಾತ್ರೆ ಹೊರಟಿದ್ದ. ಪ್ರತಿ ವರ್ಷದಂತೆ ಗ್ರಾಮಸ್ಥರ (Villagers) ಜೊತೆಗೂಡಿ ಶ್ರೀಶೈಲ ಪಾದಯಾತ್ರೆ ಹೊರಟಿದ್ದ. ಪಾದಯಾತ್ರೆ (hike) ಮಾನ್ವಿ ತಾಲೂಕಿನ ಚಿಕ್ಕಕೊಟ್ನೆಕಲ್ ಗ್ರಾಮಕ್ಕೆ ತಲುಪಿತ್ತು. ಸುಸ್ತಾಗಿದ್ದ (tired) ಕಾರಣ ದಾರಿ ಮಧ್ಯೆ ವಿಶ್ರಾಂತಿ ಮಾಡಲು ಶ್ರೀಶೈಲ ಕುಳಿತಿದ್ದ. ಈ ವೇಳೆ ಹೃದಯಾಘಾತವಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಮಾನ್ವಿ ಪೊಲೀಸರು (manvi police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮಾನ್ವಿ ತಾಲೂಕು ಸರಕಾರಿ ಆಸ್ಪತ್ರೆಗೆ (Hospital) ರವಾನೆ ಮಾಡಲಾಗಿದೆ.
[ays_poll id=3]