This is the title of the web page
This is the title of the web page
State News

ಆಧುನಿಕ ತಂತ್ರಜ್ಞಾನವನ್ನು ಬಳಕೆಗೆ ವಿಶೇಷ ಯೋಜನೆ


k2 ನ್ಯೂಸ್ ಡೆಸ್ಕ್ : ರಾಜ್ಯದ ಟೊಪ್ ನಗರಗಳಲ್ಲಿರುವ ದೋಭೀಘಾಟ್ ಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸರ್ಕಾರ ವಿಶೇಷವಾಗಿರುವ ಸಹಾಯಧನ, ಯೋಜನೆಯನ್ನು ಮುಂದಿನ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಾನೂನಾತ್ಮಕ ಪರಿಶೀಲನೆ : ಈ ಸಮಾಜವನ್ನು ಗುರುತಿಸಿದ್ದು ಬಿ.ಎಸ್.ಯಡಿಯೂರಪ್ಪನವರು. ರಾಜಕೀಯವಾಗಿ ಈ ಸಮುದಾಯವನ್ನು ಗುರುತಿಸಿ, ಸಮಾಜವನ್ನು ಭೀಷ್ಮರಂತೆ ಮುನ್ನಡೆಸುತ್ತಿದ್ದಾರೆ. ಸರ್ಕಾರಕ್ಕೆ ಕೂಡ ಸಮುದಾಯದ ಬಗ್ಗೆ ಕಾಳಜಿ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ಈ ಸಮುದಾಯದ ಬಹು ದಿನಗಳ ಬೇಡಿಕೆಯ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಏಳೆಂಟು ವರ್ಷ ಯಾರೂ ಏನೂ ಮಾಡಿಲ್ಲ. ಕಾನೂನಾತ್ಮಕವಾಗಿ ಸಂಪೂರ್ಣವಾಗಿ ಪರಿಶೀಲಿಸಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗುವುದು. ಸಮುದಾಯದವರು ಸಂಘಟಿತರಾಗಿ ಸ್ವಚ್ಛತೆಯನ್ನು ಪಡೆದುಕೊಂಡು ಸ್ವಾಭಿಮಾನದ ಬದುಕು ಬದುಕಲು ಕ್ರಮ ಕೈಗೊಳ್ಳಾಗುವುದು. ಸರ್ಕಾರ ಈಗಾಗಲೇ ಕಾಯಕ ಯೋಜನೆಯನ್ನು ರೂಪಿಸಿದೆ. ಅನುದಾನವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು. ಮಕ್ಕಳಿಗೆ ವಿದ್ಯಾಭ್ಯಾಕ್ಕೆ ಸ್ವಯಂ ಉದ್ಯೋಗಕ್ಕೆ ಅವಕಾಶಗಳನ್ನು ನೀಡಲಾಗಿದೆ. ಇದನ್ನು ಬಳಸಿಕೊಂಡು ಮುಂದೆ ಬರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.

ಸಂಘಟಿತರಾಗಿ : ಮಾಚೀದೇವರ ಕಾಯಕನಿಷ್ಠೆ ಮತ್ತು ರಕ್ಷಣೆ ಮಾಡಲು ವೀರತ್ವ ಎರಡೂ ಗುಣಧರ್ಮಗಳನ್ನು ಸಮಾಜದಲ್ಲಿ ಅಳವಡಿಸಿ ಸಂಘಟಿತರಾದರೆ ನ್ಯಾಯ ದೊರಕುತ್ತದೆ ಎಂದರು. ನ್ಯಾಯ ನೀಡುವ ಸಂದರ್ಬದಲ್ಲಿ ಇತರರಿಗೆ ಅನ್ಯಾಯವಾಗದಂತೆ ಎಚ್ಚರಿಕೆಯಿಂದ ಮಾಡುವ ಜವಾಬ್ದಾರಿಯನ್ನೂ ನಿಭಾಯಿಸಲಾಗುವುದು ಎಂದರು.

ಕಾಯಕ ಸಮುದಾಯಗಳ ಒಗ್ಗಟ್ಟಿನಿಂದ ಸಾಮಾಜಿಕ ನ್ಯಾಯ : ಮಡಿವಾಳ ಮಾಚಿದೇವರ ಅಭೂತಪೂರ್ವ ಇತಿಹಾಸ ಇದೆ. ಬಸವಣ್ಣನವರ ಕಾಲದಲ್ಲಿ ಇದ್ದ ಮಹತ್ವದ ಸ್ಥಾನ ಹೊಂದಿದ್ದರು.ಅವರ ಕಾಯಕನಿಷ್ಠೆ ಪ್ರತಿಪಾದಿಸಿದವರು. ಮಡಿವಾಳ ಮಾಚಿದೇವ ಅವರು _354 ವಚನಗಳನ್ನು ರಚನೆ ಮಾಡಿ, ಸಮಾಜದಲ್ಲಿ ಸ್ವಾಭಿಮಾನದ ಸ್ಥಾನ ಪಡೆದುಕೊಂಡಿದ್ದರು. ಅನುಭವ ಮಂಟಪ ಪ್ರವೇಶಿಸಲು ಪರೀಕ್ಷೆ ನಡೆಯುತ್ತಿತ್ತು. ಅದನ್ನು ಮಡಿವಾಳ ಮಾಚಿದೇವ ಅವರು ನಡೆಸುತ್ತಿದ್ದರು‌. ಕೀಳರಿಮೆಯಿಂದ ಹೊರಬಂದು ದಿಟ್ಟತನದಿಂದ ಸ್ವಾಭಿಮಾನದ ಸ್ಥಾನವನ್ನು ಪಡೆದುಕೊಂಡಿದ್ದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು.ಕಾಯಕದ ಮೂಲಕ ಸ್ವರ್ಗ ಕಾಣವುದು. ಎಲ್ಲ ಕಾಯಕ ಸಮುದಾಯಗಳನ್ನು ಒಗ್ಗೂಡಿಸಿ ಬಸವಣ್ಣನವರು ಅನುಭವ ಮಂಟಪ ರಚನೆ ಮಾಡಿದರು ಎಂದರು.

ನ್ಯಾಯ ದೊರೆಯಲಿದೆ : ಕಾಯಕ ಮಾಡುವ ಎಲ್ಲ ಸಮುದಾಯಗಳು ಒಟ್ಟಾದಾಗ ಸಾಮಾಜಿಕ ನ್ಯಾಯ ಸಿಗುತ್ತದೆ. ಕಲ್ಯಾಣದಲ್ಲಿ ಕ್ರಾಂತಿಯಾದಾಗ ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಮಡಿವಾಳ ಮಾಚಿದೇವ ಪ್ರಮುಖ ಪಾತ್ರ ವಹಿಸಿದರು. ಅದಕ್ಕೆ ಅವರನ್ನು ವೀರ ಮಡಿವಾಳ ಮಾಚಿದೇವ ಅಂತ ಕರೆಯುತ್ತಾರೆ‌ ಎಂದರು.


[ays_poll id=3]