K2kannadanews.in
ಕ್ರೈಂ ನ್ಯೂಸ್ : ಕೆಟ್ಟು ನಿಂತ ಗೂಡ್ಸ್ ವಾಹನ (goods vehicle) ದುರಸ್ತಿ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಸಿಮೆಂಟ್ ಟ್ಯಾಂಕರ್ (Cement Tanker) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ 3 ಮೃತಪಟ್ಟ(3 died) ಘಟನೆ ಇವಣಿ ಬಳಿ ನಡೆದಿದೆ.
ಕಲಬುರಗಿ(kalburgi) ಜಿಲ್ಲೆಯ ಚಿತ್ತಾಪುರ(chithapur) ತಾಲ್ಲೂಕಿನ ಇವಣಿ ಬಳಿ ನಡೆದ ಅಪಘಾತದಲ್ಲಿ ಪ್ರಶಾಂತ, ವಿಠಲ್ ಹಾಗೂ ಮಂಗಲಿ ಮೃತಪಟ್ಟ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಲಬುರಗಿಯಿಂದ ಸೇಡಂ(sedam) ಮಾರ್ಗವಾಗಿ ಹೈದರಾಬಾದಗೆ ತೆರಳುವಾಗ ಗೂಡ್ಸ್ ಲಾರಿ ಕೆಟ್ಟು ನಿಂತಿತ್ತು, ಲಾರಿ ರಿಪೇರಿ ಮಾಡುತ್ತಿದ್ದ ವೇಳೆ ಸಿಮೆಂಟ್ ಟ್ಯಾಂಕರ್ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಹಲವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಮಾಡಬಾಳ ಪೊಲೀಸರು (police) ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
[ays_poll id=3]