K2kannadanews.in
ರಾಯಚೂರು : ಶಾಸಕ ಎಸ್ ಟಿ ಸೋಮಶೇಖರ್(ST Somshekar) ಹಾಗೂ ಹೆಬ್ಬಾರ್ (Hebbar) ವಿರುದ್ಧ ಕೆ.ಎಸ್. ಈಶ್ವರಪ್ಪ(KS Eshwarappa) ಕಿಡಿ ಕಾರಿದ್ದಾರೆ. ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಇನ್ನೊಂದು ಕಡೆ ಮಾಡಬಾರದು ಅಂತೆ ಹರಿಹಾಯ್ದರು.
ರಾಯಚೂರಿನಲ್ಲಿ ಮಾದ್ಯಮದೊಂದಿಗೆ (Raichur media) ಮಾತನಾಡಿದ ಅವರು, ಬಿಜೆಪಿ (BJP) ಅಲ್ಲಿ ಇರೋ ಹಾಗಿದ್ರೆ ಇರಿ, ಇಲ್ಲಾ ಹೋಗಿ ಅಂತ ಈಶ್ವರಪ್ಪ ಎಚ್ಚರಿಕೆ (Warning) ಕೊಟ್ಟಿದ್ದಾರೆ. ಹಿಂದೆ ಕಾಂಗ್ರೇಸ್ (Congress) ಬಿಟ್ಟು ಬಿಜೆಪಿಗೆ ಬಂದ್ರು, ಚುನವಾಣೆಯಲ್ಲಿ (Electction) ನಿಲ್ಸಿ, ಗೆಲ್ಸಿ ಮಂತ್ರಿ ಮಾಡಾಯ್ತು, ಈಗ ಮತ್ತೆ ಗೆದ್ದಾಯ್ತು. ಗೆದ್ದ ಮೇಲೆ ತಿರಗಾ ಸಿಎಂ ಸಿದ್ದರಾಮಯ್ಯ (CM Siddaramamia), ಡಿಕೆ ಶಿವಕುಮಾರ್ (DK Shivakumar) ಬಗ್ಗೆ ಒಲವಾಗಿವೆ, ಕಾಂಗ್ರೆಸ್ ಬಗ್ಗೆ ಒಲವಾಗಿದೆ ಅನ್ಸುತ್ತೆ, ಅವರಿಗೆ ನೇರವಾಗಿ ಒಂದು ಮಾತು ಹೇಳ್ತಿನಿ, ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಹತ್ರ ಮಾಡಬಾರ್ದು, ಇಂಥಾ ವಿಚಾರದಲ್ಲಿ ಅವರಿಂದ ವೈಕ್ತಿಕವಾಗಿ ನೊಂದಿದ್ದೇನೆ ಎಂದರು.
[ays_poll id=3]