This is the title of the web page
This is the title of the web page
Politics News

ರಾಜ್ಯ BJPಗರು ಬೀದಿಪಾಲು ಅಬ್ಬೇಪಾರಿಗಳು : ಕಾಂಗ್ರೆಸ್‌


K2 ನ್ಯೂಸ್ ಡೆಸ್ಕ್ : ಮೋದಿಯವರ ಬೆಂಗಳೂರು ಭೇಟಿ ವೇಳೆ ರಾಜ್ಯ ಬಿಜೆಪಿ ನಾಯಕರು ರಸ್ತೆಯಲ್ಲಿ ಹಾಕಿರುವ ಬ್ಯಾರಿಕೇಡ್‌ಗಳ ಹಿಂದೆ ನಿಂತು ಸಾಮಾನ್ಯರಂತೆ ಕೈ ಬೀಸಿರೋದಕ್ಕೆ, Xನಲ್ಲಿ ಪೋಸ್ಟ್‌ ಹಾಕಿರುವ ಕಾಂಗ್ರೆಸ್‌, ರಾಜ್ಯ ಬಿಜೆಪಿ ನಾಯಕರದ್ದು ಎಂಥಾ ದುಸ್ಥಿತಿ ಬಂದಿದೆ ಎಂದು ಕಾಂಗ್ರೆಸ್‌ ವ್ಯಂಗ್ಯ ಮಾಡಿದೆ.

ರಾಜ್ಯ ಬಿಜೆಪಿಯ ದಂಡ ನಾಯಕರು, ಚಕ್ರವರ್ತಿಗಳು, ಸಾಮ್ರಾಟರೆಲ್ಲ ಇಂದು ಬೀದಿ ಪಾಲಾಗಿದ್ದಾರೆ. ಛೇ, ಮಿನಿಮಮ್ ಮರ್ಯಾದೆಯೂ ಇಲ್ಲದಾಯಿತೇ? ಅಂತ ಕಾಂಗ್ರೆಸ್​ ಕಾಲೆಳೆದಿದೆ. ಮೋದಿಯ ಕೋಪ ತಣ್ಣಗಾಗುವವರೆಗೆ ವಿರೋಧ ಪಕ್ಷದ ನಾಯಕನ ಆಯ್ಕೆ ಆಗುವುದಿಲ್ಲ, ಮೋದಿ ಕೋಪ ತಣ್ಣಗಾಗುವುದೂ ಇಲ್ಲ. ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷ ನೇಮಕ ಆಗುವುದೂ ಅನುಮಾನ, ಹಾಲಿ ಅಧ್ಯಕ್ಷ ಬೀದಿ ಪಾಲಾಗಿದ್ದಾರೆ. ಬಿಜೆಪಿ ಅಬ್ಬೇಪಾರಿಯಾಗಿದೆ ಎಂದು ಕಾಂಗ್ರೆಸ್​ ಟ್ರೋಲ್​ ಮಾಡಿದೆ. ಅಂದ್ಹಾಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಮಾಜಿ ಸಚಿವ ಆರ್‌. ಅಶೋಕ್‌, ಮುನಿರತ್ನ ಅವ್ರು ಬ್ಯಾರಿಕೇಡ್‌ ಹಿಂದೆ ನಿಂತು ಕೈ ಬೀಸುತ್ತಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.


[ays_poll id=3]