K2kannadanews.in
surrendered to hanging ಮಾನ್ವಿ : ಮಧ್ಯ ಸೇವಿಸ ಬೇಡ ಎಂದು ಅಪ್ಪ (father) ಬುದ್ಧಿ ಹೇಳಿದ್ದಕ್ಕೆ (word of wisdom) ಯುವಕನೊಬ್ಬ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ (suicide) ಮಾಡಿಕೊಂಡ ಘಟನೆ ಮಾನ್ವಿ ಪಟ್ಟಣದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ಪಟ್ಟಣದಲ್ಲಿ ಘಟನೆ ನಡೆದಿದೆ. ಆದರ್ಶ (Adrsh 24) ವರ್ಷದ ಯುವಕ ಮೃತ ದುರ್ದೈವಿ ಎಂದು ಹೇಳಲಾಗುತ್ತಿದೆ. ಪಟ್ಟಣದಲ್ಲಿ ಹೇರ್ ಕಟಿಂಗ್ (Hair cutting) ಶಾಪ್ ಹೊಂದಿದ್ದ ಯುವಕ, ವಿಪರೀತ ಕುಡಿತದ ಚಟಕ್ಕೆ ಬಲಿಯಾಗಿದ್ದ (Addiction to alcohol), ಮಗ ಹಾಳಾಗುತ್ತಿದ್ದಾನಲ್ಲ ಎಂದು ತಂದೆ ಮದ್ಯಸೇವನೆ ಬಿಡುವಂತೆ ಬುದ್ಧಿವಾದ ಹೇಳಿದ್ದಾನೆ. ಈ ವಿಚಾರವಾಗಿ ಅಪ್ಪನೊಂದಿಗೆ ಆದರ್ಶ ಗಲಾಟೆ ಮಾಡಿಕೊಂಡಿದ್ದಾನೆ.
ಅಪ್ಪನ ಮಾತಿಗೆ ಮನನೊಂದು ಬಾತ್ ರೂಂನ (Bath room) ಪೈಪ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಮಾನ್ವಿ ಪಟ್ಟಣ ಪೊಲೀಸರು (Manvi police) ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ (Case) ದಾಖಲಾಗಿದೆ.
[ays_poll id=3]