K2kannadanews.in
Accident News ಸಿಂಧನೂರು : ಚಾಲಕನ (Driver) ನಿಯಂತ್ರಣ ತಪ್ಪಿ, ಅಕ್ಕಿ (Rice) ಹೊತ್ತು ಸಾಗುತ್ತಿದ್ದ ಲಾರಿಯಂದು (Lorry) ಹೆದ್ದಾರಿಯಲ್ಲಿ (Highway) ಮಗುಚಿ ಬಿದ್ದ ಕಾರಣ ಟ್ರಾಫಿಕ್ ಜಾಮ್ (Traffic jam) ಉಂಟಾದ ಘಟನೆ ಸಿಂಧನೂರು ನಗರದ ಹಿರೇಹಳ್ಳದ ಬಳಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿ ಬರುವ ಹಿರೇಹಳ್ಳದ ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಬೆಳಗಿನ ಜಾವ 3 ಗಂಟೆ (Early morning) ಸುಮಾರಿಗೆ ರಸ್ತೆ ಮಧ್ಯದಲ್ಲಿ ಲಾರಿ ಮುಗಿಚಿ ಬಿದ್ದಿದೆ. ಹೆದ್ದಾರಿ ಮಧ್ಯದಲ್ಲಿ ಅಪಘಾತ (Accident) ಜರುಗಿದ್ದರಿಂದ ಸಿಂಧನೂರು- ರಾಯಚೂರು ಮುಖ್ಯ ರಸ್ತೆ ಸಂಪೂರ್ಣ ಬಂದಾಗಿ ಕಿಲೋಮಿಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ತದನಂತರ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು (Police) ತೆರವು ಕಾರ್ಯಚರಣೆ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಂಧನೂರು ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
[ays_poll id=3]