This is the title of the web page
This is the title of the web page
Crime NewsLocal News

ತುರ್ವಿಹಾಳ : ಸೋದರಿ ಮನೆಗೆ ಹೋಗಿದ್ದ ವೃದ್ಧ ಕೆರೆಯಲ್ಲಿ ಶವವಾಗಿ ಪತ್ತೆ..?


K2kannadanews.in

Old man died in lake ಸಿಂಧನೂರು : ಕೆರೆಯಲ್ಲಿ ನೀರು ಕುಡಿಯಲು (Drinking water) ಹೋದ ವೃದ್ಧ (Old man) ಕಾಲು ಜಾರಿ ಬಿದ್ದು ಈಜಲಾಗದೇ ಮೃತಪಟ್ಟಿರುವ (Died) ಘಟನೆ ತುರ್ವಿಹಾಳ ಪಟ್ಟಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಹೊರ ವಲಯದಲ್ಲಿ ಜರುಗಿದೆ. ವಣಗೇರಿ ನಿವಾಸಿ ಹನುಮಪ್ಪ (Hanumanthappa 70) ಮೃತಪಟ್ಟ ವೃದ್ಧ. ತುರ್ವಿಹಾಳ ಪಟ್ಟಣದಲ್ಲಿ ವಾಸಿಸುತ್ತಿರುವ ಸಹೋದರಿಯ (Sister) ಮನೆಗೆ ಬಂದಿದ್ದ ಹನುಮಪ್ಪ ನೀರು ಕುಡಿಯಲು ಕೆರೆಗೆ ಹೋದಾಗ ಕಾಲುಜಾರಿ (footpath) ಬಿದ್ದು ಈಜಲು ಬಾರದೇ ಸಾವನಪ್ಪಿದ್ದಾನೆಂದು ತಿಳಿದು ಬಂದಿದೆ.

ಕೆರೆ ನೀರಿನಲ್ಲಿ ತೇಲಿದ ಶವವನ್ನು (corpse) ಸ್ಥಳೀಯರು ಹೊರಗಡೆ ತೆಗೆದು ಪೊಲೀಸರಿಗೆ ಒಪ್ಪಿಸಿದ್ದು (Hand over police) ಅವರು ಮರಣೋತ್ತರ ಪರೀಕ್ಷೆ ನಡೆಸಿ ಶವ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]