ಲಿಂಗಸುಗೂರು : ಸ್ನೇಹಿತನ ಮೂಲಕ ಲಂಚ ಪಡೆಯುವಾಗ ಸರ್ವೆಯರ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಲಿಂಗಸುಗೂರಿನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದ ಖಾಸಗಿ ಆಸ್ಪತ್ರೆಯ ಬಳಿ ನಡೆದಿದೆ. ಜಮೀನಿನ ನಕ್ಷೆ ನೀಡಲು ಹಣದ ಬೇಡಿಕೆ ಒಡ್ಡಿದ್ದ ಸರ್ವೇಯರ್ ಪ್ರವೀಣ್ ಕುಮಾರ್ ನನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಲಿಂಗಸುಗೂರು ತಾಲೂಕಿನ ಗುರುಗುಂಟಾದಲ್ಲಿನ ಸರ್ವೇ ನಂ. 406 ರ ನಕ್ಷೆ ನೀಡಲು ಸರ್ವೇಯರ್ ಪ್ರವೀಣಕುಮಾರ್ ಲಂಚಕ್ಕೆ ಬೇಡಿಗೆ ಇಟ್ಟಿದ್ದರಂತೆ. ಲಂಚದ ಹಣವನ್ನು ಸ್ನೇಹಿತನ ಮೂಲಕ ಹಣ ಪಡೆಯುವಾಗ ರಾಯಚೂರು ಲೋಕಾಯುಕ್ತ ಅಧಿಕಾರಿ ಹನುಮಂತ್ರಾಯ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧನ ಮಾಡಿದೆ.
[ays_poll id=3]