LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಶಿರಾ ಬಳಿ ಬಸ್–ಲಾರಿ ಅಪಘಾತ ಒಂದು ಸಾವು, 15 ಜನರಿಗೆ ಗಾಯ..

ಮುದುಗಲ್ಲ್ ಪಟ್ಟಣದ MBBS ವಿದ್ಯಾರ್ಥಿನಿ ಸಾವು..

 

 

 

ಬೆಂಗಳೂರಿಗೆ ತೆರಳುತ್ತಿದ್ದ ಬೀದರ್ ಘಟಕದ ಕೆಕೆಆರ್‌ಟಿಸಿ ಬಸ್ ಒಂದು ಶಿರಾ ಬಳಿ ಅಪಘಾತಕ್ಕೆ ಓಳಗಾಗಿ ಓರ್ವ MBBS ವಿದ್ಯಾರ್ಥಿನಿ ಮೃತಪಟ್ಟು 15 ಜನ ಗಾಯಗೊಂಡ ಘಟನೆ ಬೆಳಗಿನ ಜಾವ 3 ಗಂಟೆಗೆ ಜರುಗಿದೆ.

ಶಿರಾ ಸಮೀಪ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ರಾಯಚೂರು ಜಿಲ್ಲೆಯ ಲಿಂಗಸುಗೂರ ತಾಲ್ಲೂಕಿನ ಮುದುಗಲ್ ಪಟ್ಟಣದ ವೆಂಕಟರಾಯನಪೇಟೆ ಹರಿಜನ ವಾರ್ಡ್ ನಿವಾಸಿ, ಪ್ರಥಮ ವರ್ಷದ MBBS ವಿದ್ಯಾರ್ಥಿನಿ ಸುಮಂಗಲ(22) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಬೀದರ್ ನಿಂದ ಬೆಂಗಳೂರಿಗೆ ಹೊರಟಿದ್ದ ಬಸವಕಲ್ಯಾಣ ವಿಭಾಗದ ಕೆಕೆಆರ್ಟಿಸಿ ಬಸ್ ಅಪಘಾತಕ್ಕೆ ಒಳಗಾಗಿದೆ. ಅಪಘಾತದಲ್ಲಿ ಓರ್ವ ಎಂ ಬಿ ಬಿ ಎಸ್ ವಿದ್ಯಾರ್ಥಿನಿ ಮೃತಪಟ್ಟು ಸುಮಾರು 15 ಪ್ರಯಾಣಿಕರು ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಘಟನೆ ನಡೆದಿದ್ದು, ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST