LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಹಾರಾ ಮರುಭೂಮಿಯಲ್ಲಿ ಕೆಟ್ಟು ನಿಂತ ಲಾರಿ..

ಬಾಯಾರಿಕೆಯಿಂದ 49 ಮಂದಿ ಸಾವು

ನಿಯಾಮಿ : ಆಫ್ರಿಕಾದ ಸಹಾರಾ ಮರುಭೂಮಿಯಲ್ಲಿ ಲಾರಿಯೊಂದು ಕೆಟ್ಟು ನಿಂತ ಪರಿಣಾಮ, ತೀವ್ರ ಬಾಯಾರಿಕೆ ಮತ್ತು ನಿರ್ಜಲೀಕರಣದಿಂದಾಗಿ 49 ಮಂದಿ ವಲಸೆ ಕಾರ್ಮಿಕರು ದುರಂತ ಅಂತ್ಯ ಕಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮೂಲಗಳ ಪ್ರಕಾರ, ಮುಂಬರುವ ಹಬ್ಬದ ಆಚರಣೆಗಾಗಿ ನೆರೆಹೊರೆಯ ಮಾಲಿ ದೇಶದಿಂದ ತಮ್ಮ ಸ್ವಗ್ರಾಮಗಳಿಗೆ ಮರಳುತ್ತಿದ್ದ ಪ್ರಯಾಣಿಕರನ್ನು ಹೊತ್ತಿದ್ದ ಲಾರಿಯೊಂದು ನೈಜರ್ ದೇಶದ ಉತ್ತರದ ಅತಿ ವಿಕೋಪದ ಹವಾಮಾನ ಹೊಂದಿರುವ ನಿರ್ಜನ ಮರುಭೂಮಿ ಪ್ರದೇಶದಲ್ಲಿ ಸಿಲುಕಿಕೊಂಡಿತ್ತು. ಪ್ರಯಾಣದ ಮಧ್ಯೆ ಇದ್ದಕ್ಕಿದ್ದಂತೆ ಲಾರಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕೆಟ್ಟು ನಿಂತಿತ್ತು. ಈ ವೇಳೆ ಚಾಲಕ, ಕ್ಲೀನರ್ ಹಾಗೂ ಪ್ರಯಾಣಿಕರು ಸುಡುವ ಬಿಸಿಲಿನಲ್ಲೇ ವಾಹನವನ್ನು ದುರಸ್ತಿ ಮಾಡಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನವಾಗಲಿಲ್ಲ.

ಸಹಾರಾ ಮರುಭೂಮಿಯ ವಿಪರೀತ ತಾಪಮಾನ ಹಾಗೂ ಆ ಪ್ರದೇಶದಲ್ಲಿ ಹನಿ ನೀರು ಸಿಗದ ಕಾರಣ, ದಿನಗಟ್ಟಲೆ ಸಿಲುಕಿಕೊಂಡಿದ್ದ ಪ್ರಯಾಣಿಕರು ತೀವ್ರ ಬಾಯಾರಿಕೆಯಿಂದ ಬಳಲಿ ಒಬ್ಬೊಬ್ಬರಾಗಿ ಪ್ರಾಣ ಬಿಟ್ಟಿದ್ದಾರೆ. ದಿನಗಳ ನಂತರ ರಕ್ಷಣಾ ತಂಡಗಳು ಮತ್ತು ಸ್ಥಳೀಯ ಅಧಿಕಾರಿಗಳು ಈ ನಿರ್ಜನ ಪ್ರದೇಶವನ್ನು ತಲುಪಿದಾಗ, ಘೋರ ದುರಂತ ಅನಾವರಣಗೊಂಡಿದೆ.

ಲಾರಿಯ ಕೆಳಗೆ ಬಿಸಿಲಿನಿಂದ ರಕ್ಷಣೆ ಪಡೆಯಲು ಯತ್ನಿಸಿದ್ದ ಸ್ಥಿತಿಯಲ್ಲಿ ಹಾಗೂ ಸುತ್ತಮುತ್ತಲ ಮರಳುಗಾಡಿನಲ್ಲಿ 49 ಮೃತದೇಹಗಳು ಪತ್ತೆಯಾಗಿದ್ದವು. ಮೃತದೇಹಗಳು ಸಂಪೂರ್ಣವಾಗಿ ಕೊಳೆತುಹೋಗಿದ್ದ ಕಾರಣ, ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಅಧಿಕಾರಿಗಳು ಮೃತರ ಗುರುತು ಪತ್ತೆ ಹಚ್ಚಿದ ನಂತರ ಎಲ್ಲರನ್ನೂ ಮರುಭೂಮಿಯ ಅದೇ ನಿರ್ಜನ ಪ್ರದೇಶದಲ್ಲೇ ಸಾಮೂಹಿಕ ಸಮಾಧಿಗಳನ್ನು ನಿರ್ಮಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

ಈ ದುರಂತವು ಆಫ್ರಿಕಾ ಖಂಡದಲ್ಲಿ ವಲಸೆ ಕಾರ್ಮಿಕರು ಎದುರಿಸುತ್ತಿರುವ ಅಪಾಯಕಾರಿ ಪ್ರಯಾಣದ ಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST