This is the title of the web page
This is the title of the web page
State NewsVideo News

ಕತ್ತೆ ಕಾಯ್ತಿದ್ರಾ..? ಸಚಿವ ಕೃಷ್ಣ ಬೈರೆಗೌಡ ಅಧಿಕಾರಿಗಳಿಗೆ ತರಾಟೆ


K2kannadanews.in

ರಾಯಚೂರು : ಕತ್ತೆ ಕಾಯ್ತಿದ್ರಾ..? ಜನರಿಂದ ಫಿಸಿಕಲ್ ಫೈಲ್ ಸ್ವೀಕರಿಸದಂತೆ ಹೇಳಿಲ್ವಾ.. ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಕಂದಾಯ ಸಚಿವ ಕೃಷ್ಣ ಬೈರೆಗೌಡ ಅಧಿಕಾರಿಗಳ ಕಾರ್ಯವೈಖರಿಗೆ ಅಸಮಧಾನ ವ್ಯಕ್ತಪಡಿಸಿದರು.

ರಾಯಚೂರಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ನಡೆಯುತ್ತಿರುವ ಕಂದಾಯ ಇಲಾಖೆ ಸಭೆಯಲ್ಲಿ, ಇ- ಫೈಲ್ ಸಿಸ್ಟಮ್ ಸಮರ್ಪಕ ಜಾರಿ ಮಾಡದ ಹಿನ್ನೆಲೆ ಮಿನಿಸ್ಟರ್ ಗರಂ ಆದರು, ರಾಯಚೂರು ಎಸಿ, ದೇವದುರ್ಗ, ಮಾನ್ವಿ ತಹಶಿಲ್ದಾರಗಳಿಗೆ ತರಾಟೆ ತೆಗೆದುಕೊಂಡರು. 5 ತಿಂಗಳಿಂದ ಹೇಳ್ತಾಯಿದಿನಿ ಯಾರಿಗೆ ಯಾಮಾರಿಸುತ್ತಿದ್ದೀರಿ. ಆಡಳಿತ ಪಾರದರ್ಶಕತೆಯಿಂದ ನಡೆಯಬಾರದು, ಜನ ಈ ಟೇಬಲ್ ನಿಂದ ಆ ಟೇಬಲ್ ಗೆ ಹೋಗ್ತಾಯಿರಬೇಕಾ.‌

ಯಾಕೆ ಇ- ಫೈಲ್ ಸಿಸ್ಟಮ್ ಪ್ರಗತಿ ಕಾಣ್ತಿಲ್ಲ, ನಿಮ್ಮ ಜೀವ ಅದರಲ್ಲೇ ಇದ್ದಂಗೆ ಇದೆ. ಜನರನ್ನು ಅಲೆದಾಡಿಸೋದೆ ನಿಮ್ಮ ಕೆಲಸಾನಾ. ಫೈಲ್ ಇಟ್ಕೊಂಡು ಬೇಕಾದವರದ್ದು ಮೂವ್ ಮಾಡಿ, ಬೇಡವಾಗಿರೋರ್ದು ಕಳೆದು ಹಾಕೋದಾ ನಿಮ್ಮ ಕೆಲಸ, ಜನ ಕಚೇರಿಗೆ ಅಲೆದು ಅಲೆದು ಸಾಯ್ಬೇಕಾ, ಎಸಿ ಕಚೇರಿಯಿಂದ ಶುರುವಾಗಬೇಕಿತ್ತು ಇ ಫೈಲ್, ನಿಮಗೆ ಮೈಂಡ್ ಇಲ್ಲಾ, ಮನಸ್ಸಿಲ್ಲಾ ಅಂದ್ರೆ‌ ಏನು, ಜನರ ಜುಟ್ಟು ನಿಮ್ಮ ಕೈಯಲ್ಲಿರಬೇಕಲ್ವಾ ಎಂದು ಎಇ ಅವರಿಗೆ ತರಾಟೆಗೆ ತೆಗೆದುಕೊಂಡರು.


[ays_poll id=3]