ರಾಯಚೂರು : ಹೆಂಡತಿಯ ಸೀಮಂತ್ ಕ್ಕಾಗಿ ಬ್ಯಾಂಕಿನಿಂದ ಚಿನ್ನ ತರುತ್ತಿದ್ದ ವೇಳೆ ಐನಾತಿ ಕಳ್ಳರು ಬೇರೆಡೆ ಗಮನ ಸೆಳೆದು ಚಿನ್ನಾಭರಣ ಎಗರಿಸಿದ ಘಟನೆ ಮಾನ್ವಿಯಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸೂಪರ್ ಮಾರ್ಕೆಟ್ ಎದುರು ಹಾಡುಹಗಲೇ ಕಳ್ಳತನ ನಡೆದಿದ್ದು, ಗಮನ ಬೇರೆಡೆ ಸೆಳೆದು 20 ತೊಲೆಯ ಚಿನ್ನಾಭರಣ ಎಸ್ಕೇಪ್ ಮಾಡಿದ್ದಾರೆ. ಮೂರು ಐನಾತಿ ಕಳ್ಳರು ಕೃತ್ಯ ಮಾಡಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರೋ ನವೀನ್ ಎಂಬುವರು, ಹೆಂಡತಿಯ ಸೀಮಂತ್ ಕಾರ್ಯಕ್ರಮಕ್ಕಾಗಿ ಖಾಸಗಿ ಬ್ಯಾಂಕ್ ನಿಂದ ಚಿನ್ನಾಭರಣ ಡ್ರಾ ಮಾಡಿದ್ದರು. ಈ ವೇಳೆ ಕಾರಿನ ಬಾನೆಟ್ ಮೇಲೆ ಆಯಿಲ್ ಹಾಕಿ ಗಮನ ಬೇರೆಡೆಗೆ ಸೆಳೆದಿದ್ದಾರೆ.
ಬಾನೆಟ್ ಚೆಟ್ ಮಾಡುತ್ತಿದ್ದ ವೇಳೆ ಮತ್ತೋರ್ವ ಯುವಕ ಕಾರಿನಲ್ಲಿದ್ದ ಚಿನ್ನ ಎಗರಿಸಿದ್ದಾನೆ. ಬಳಿಕ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾನೆ. ಮುಖ್ಯರಸ್ತೆಯಲ್ಲಿ ಕಾರು ನಿಲ್ಲಿಸಿದ್ದರಿಂದ ಕಳ್ಳರ ಕೈಚಳಕ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂದಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
[ays_poll id=3]