K2kannadanews.in
Illegal sand mafiya ಸಿಂಧನೂರು : ಮರಳು ತುಂಬಿದ್ದ ಟ್ರ್ಯಾಕ್ಟರ್ ಚೇಸಿಂಗ್ ಮಾಡುವಾಗ ನಿಯಂತ್ರಣ ತಪ್ಪಿ ಪೊಲೀಸ್ ಜೀಪ್ ಪಲ್ಟಿಯಾಗಿ ಬಿದ್ದ ಘಟನೆ ರೈತ ನಗರ ಕ್ಯಾಂಪ್ ನಲ್ಲಿ ನಡೆದಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ರೈತ ನಗರ ಕ್ಯಾಂಪ್ ಬಳಿ ಘಟನೆ ನಡೆದಿದ್ದು. ಟ್ರ್ಯಾಕ್ಟರ್ ಮುಖಾಂತರ ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿತ್ತು. ಮಾಹಿತಿ ತಿಳಿದ ಟ್ರಾಫಿಕ್ ಪೊಲೀಸ್ರು ಸ್ಥಳಕ್ಕೆ ಆಗಮಿಸಿದ್ದರು. ಪೋಲಿಸ್ ವಾಹನ ನೋಡುತ್ತಿದ್ದಂತೆ ಟ್ರಾಕ್ಟರ್ ಸಮೇತ ಪರಾರಿಯಾಗಿದ್ದರು.ಈ ವೇಳೆ ಟ್ರ್ಯಾಕ್ಟರ್ ಛೇಸ್ ಮಾಡಿದ್ದಾರೆ. ಈ ವೇಳೆ ವೇಗವಾಗಿ ಚಲಿಸಿದ್ದರಿಂದ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ಹಿಂದೆ ಬರುತ್ತಿದ್ದ ಪೊಲೀಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿ ಬಿದ್ದಿದೆ.
ಪೊಲೀಸ್ ಜೀಪ್ ಕಾಲುವೆಗೆ ಬಿದ್ದ ಪರಿಣಾಮ ಕಾನ್ಸ್ ಟೇಬಲ್ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಸಿಂಧನೂರು ಠಾಣೆಯ ಕಾನ್ಸ್ ಟೇಬಲ್ ಕರಿಯಪ್ಪ, ಹೋಂ ಗಾರ್ಡ್ ಶೆಕ್ಸಾವಲಿ ಗಾಯಗೊಂಡವರು. ಗಾಯಾಳು ಪೊಲೀಸ್ ಸಿಬ್ಬಂದಿಗಳನ್ನು ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಂಧನೂರು ಗ್ರಾಮಿಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
[ays_poll id=3]