This is the title of the web page
This is the title of the web page
Local News

ನನ್ನ ಅಧಿಕಾರ ಅವಧಿಯಲ್ಲಿ ಪಕ್ಷಬೇಧ ಮರೆತು ಅಭಿವೃದ್ಧಿ ಮಾಡಿದ್ದೇನೆ


ಸಿಂಧನೂರು : ವಯಸ್ಸಾದ ವೃದ್ಧರು ಅಂಗವಿಕಲರು ವಿಧವೆಯರನ್ನು ಕಛೇರಿಗೆ ಅಲೆದಾಡಿಸದೆ ಅವರು ಇರುವ ಮನೆಗಳಿಗೆ ಹೋಗಿ ಅವರಿಂದ ದಾಖಲಾತಿಗಳನ್ನು ಪಡೆದುಕೊಂಡು ಸತಾಯಿಸದೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ತಡ ಮಾಡಿದರೆ ಅನಿವಾರ್ಯವಾಗಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.

ನಾಡಗೌಡರ ನಡೆ ಸಾಧನೆಯ ಕಡೆ ಗ್ರಾಮ ವ್ಯಾಸ್ತವ್ಯ ಜನರ ಸಂಪರ್ಕ ಸಭೆಯ 23 ನೇ ದಿನದ ಗ್ರಾಮ ಪಂಚಾಯಿತಿ ತಾಲ್ಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನಾನು ಮಾಡುವ ಎಲ್ಲಾ ಸಭೆಗಳಲ್ಲಿ ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ನನಗೆ ದೂರು ನೀಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ದೂರುಗಳು ಬಾರದ ಹಾಗೆ ಅದಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಬೋಮ್ಮನಾಳ ದೇವಿಕ್ಯಾಂಪ್, ಚಿರತನಾಳ ಗೀತಾ ಕ್ಯಾಂಪ್ ಸೇರಿದಂತೆ ಇನ್ನಿತರ ಗ್ರಾಮ ಹಾಗೂ ಕ್ಯಾಂಪ್‌ಗಳ ಜನರು ಕುಡಿಯುವ ನೀರು, ವಿದ್ಯುತ್ ರಸ್ತೆ, ಸ್ಮಶಾನ ಸೇತುವೆ ನಿರ್ಮಾಣ ವಿದ್ಯುತ್ ಕಂಬಗಳು ಸೇರಿದಂತೆ ತಮ್ಮ ಇನ್ನಿತರ ಕುಂದು ಕೊರತೆಗಳನ್ನು ಶಾಸಕರ ಬಳಿ ಹೇಳಿ ಕೊಂಡಾಗ ಜನರ ಸಮಸ್ಯೆಗಳನ್ನು ತಡ ಮಾಡದೆ ಬೇಗನೆ ಮಾಡಿ ಕೊಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ನನ್ನ ಶಾಸಕ ಅಧಿಕಾರದ ಅವಧಿಯಲ್ಲಿ ಪಕ್ಷ ಬೇದ ಮಾಡದೆ ಎಲ್ಲರನ್ನು ಗೌರವದಿಂದ ಕಂಡು ಅವರ ಕೆಲಸಗಳನ್ನು ಮಾಡಿಕೊಟ್ಟಿದ್ದೇನೆ. ಅಲ್ಲದೆ ದೇವರಗುಡಿ ಗ್ರಾಮ ಪಂಚಾಯಿತಿಗೆ ಸುಮಾರು ೨೫ ಸಾವಿರ ಕೋಟಿ ಅನುದಾನ ನೀಡುವ ಮೂಲಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ ಆದರೆ ಐದು ವರ್ಷ ಬಹುಮತದ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಯಾಕೆ ಅಭಿವೃದ್ಧಿ ಕೆಲಸ ಮಾಡಿಲ್ಲ ಅವರು ಚುನಾವಣೆಗೆ ಬಂದಾಗ ಕೇಳಿ ಎಂದು ನಾಡಗೌಡರು ನೆರೆದಿದ್ದ ಜನರನ್ನು ಪ್ರಶ್ನಿಸಿದರು.

ನೀವು ನನಗೆ ನೀಡಿದ ಮತದಾನದ ಶಕ್ತಿಯಿಂದ ನಾನು ನಿಮ್ಮ ಕೆಲಸ ಮಾಡುತ್ತಿದ್ದೇನೆ ನಿಮ್ಮ ಮತದಾನದ ಶಕ್ತಿ ಬಗ್ಗೆ ಅರ್ಥ ಮಾಡಿಕೊಂಡು ನಿಮ್ಮ ಪರವಾಗಿ ಕೆಲಸ ಮಾಡುವ ನನಗೆ ಮತ ನೀಡಿ ಮತ್ತೊಮ್ಮೆ ಗೆಲ್ಲಿಸುವಂತೆ ಅವರು ಕೈಮುಗಿದು ಮನವಿ ಮಾಡಿಕೊಂಡರು.


[ays_poll id=3]