ಸಿಂಧನೂರು : ವಯಸ್ಸಾದ ವೃದ್ಧರು ಅಂಗವಿಕಲರು ವಿಧವೆಯರನ್ನು ಕಛೇರಿಗೆ ಅಲೆದಾಡಿಸದೆ ಅವರು ಇರುವ ಮನೆಗಳಿಗೆ ಹೋಗಿ ಅವರಿಂದ ದಾಖಲಾತಿಗಳನ್ನು ಪಡೆದುಕೊಂಡು ಸತಾಯಿಸದೆ ಸರ್ಕಾರಿ ಸೌಲಭ್ಯಗಳನ್ನು ಒದಗಿಸಬೇಕು ತಡ ಮಾಡಿದರೆ ಅನಿವಾರ್ಯವಾಗಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುಬೇಕಾಗುತ್ತದೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು. ನಾಡಗೌಡರ ನಡೆ ಸಾಧನೆಯ ಕಡೆ ಗ್ರಾಮ ವ್ಯಾಸ್ತವ್ಯ ಜನರ ಸಂಪರ್ಕ ಸಭೆಯ 23 ನೇ ದಿನದ ಗ್ರಾಮ ಪಂಚಾಯಿತಿ ತಾಲ್ಲೂಕಿನ ದೇವರಗುಡಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು ನಾನು ಮಾಡುವ ಎಲ್ಲಾ ಸಭೆಗಳಲ್ಲಿ ಅಧಿಕಾರಿಗಳು ಕೆಲಸ ಮಾಡದೆ ಕಾಲಹರಣ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ನನಗೆ ದೂರು ನೀಡುತ್ತಿದ್ದಾರೆ. ಇನ್ನು ಮುಂದೆ ಈ ರೀತಿಯ ದೂರುಗಳು ಬಾರದ ಹಾಗೆ ಅದಿಕಾರಿಗಳು ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಬೋಮ್ಮನಾಳ ದೇವಿಕ್ಯಾಂಪ್, ಚಿರತನಾಳ ಗೀತಾ ಕ್ಯಾಂಪ್...