K2kannadanews.in
Illicit Relationship : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಜೋಡಿ ಹತ್ಯೆತಾಗಿರುವ ದುರಂತ ನಡೆದಿದ್ದು, ಪುರುಷ ಮತ್ತು ಮಹಿಳೆಯನ್ನು ಕೊಲೆ (Murder Case) ಮಾಡಿ ಮೈಮೇಲೆ ಹಂತಕರು ಮುಳ್ಳಿನ ಜಾಲಿಗಿಡ ಹಾಕಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಜಯಪುರ ಜಿಲ್ಲೆಯ (Vijayapura News) ನಿಡಗುಂದಿ ತಾಲೂಕಿನ ಗಣಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಅವರಿಬ್ಬರೂ ಬೇರೆ ಬೇರೆಯವರಾಗಿದ್ದು, ಜತೆಯಾಗಿದ್ದಾಗ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಹಾಗಾಗಿ ಇದು ಅಕ್ರಮ ಸಂಬಂಧದ (Illicit Relationship) ಸಂಶಯದ ಹಿನ್ನೆಲೆಯಲ್ಲಿ ನಡೆದಿರುವ ಜೋಡಿ ಕೊಲೆ (Couple murder) ಆಗಿರಬಹುದು ಎಂದು ಸಂಶಯಿಸಲಾಗಿದೆ.
ಮಾರಡಗಿ ತಾಂಡಾ ಬಳಿ ಗಣಿ ಗ್ರಾಮದ (villege) 35 ವರ್ಷದ ಕಲ್ಲಪ್ಪ ಕುಂಬಾರ (kallappa lumbar) ಹಾಗೂ 38 ವರ್ಷದ ಪಾರ್ವತಿ ತಳವಾರ (Parvati talwar) ಹತ್ಯೆ ಮಾಡಲಾಗಿದೆ. ಮಾರಡಗಿ ತಾಂಡಾ ಬಳಿಯ ಜಮೀನಿನಲ್ಲಿ ಕಲ್ಲಪ್ಪ ಹಾಗೂ ಪಾರ್ವತಿ ಇಬ್ಬರು ಜೊತೆಯಾಗಿ ಇರುವುದನ್ನು ಕಂಡಿರುವ ಪಾರ್ವತಿ ಮನೆಯವರು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಹತ್ಯೆಯ ಬಳಿಕ ಶವಗಳ ಮೇಲೆ ಮುಳ್ಳುಕಂಟಿಯನ್ನು ಹಾಕಲಾಗಿದೆ. ಸುದ್ದಿ ತಿಳಿಯುತ್ತಲೇ ಸಿಪಿಐ ಶರಣಗೌಡ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿದ ನಿಡಗುಂದಿ ಠಾಣೆ ಪೊಲೀಸರು (Nidagundi police), ತನಿಖೆ ನಡೆಸಿದ್ದು, ತಲೆ ಮರೆಸಿಕೊಂಡಿರುವ ಹಂತಕರ ಬಂಧನಕ್ಕೆ ಬಲೆ ಬೀಸಿದ್ದಾರೆ.
[ays_poll id=3]