ಮಾನ್ವಿ : ನಿದಿ೯ಷ್ಟ ಗುರಿ ತಲುಪಲು ಜ್ಞಾನದಾಹಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಸತತ ಅಧ್ಯಯನಶೀಲತೆ ಗುಣ ಹೋಂದಿರಬೇಕು ಎಂದು ವಲಯ ಅರಣ್ಯಾಧಿಕಾರಿ ರಾಜೇಶ್ ನಾಯಕ ಹೇಳಿದರು.
ಮಾನ್ವಿ ಪಟ್ಟಣದ ಏಕಲವ್ಯ ಕರಿಯರ್ ಅಕಾಡೆಮಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವತಿಯಿಂದ ಹಮ್ಮಿಕೊಂಡಿದ್ದ ‘ಮಾದರಿ ಪರೀಕ್ಷೆ ಹಾಗೂ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಸ್ಪರ್ಧಾರ್ಥಿಗಳು ಅಧ್ಯಯನ ಅವಧಿಯನ್ನು ತಪಸ್ಸೆಂದು, ಓದುವಾಗ ಏಕಾಗ್ರತೆ ಪ್ರಮುಖ ಪಾತ್ರ ವಹಿಸುತ್ತದೆ ಹೀಗಾಗಿ ವಿದ್ಯಾರ್ಥಿಗಳು ಏಕಾಗ್ರತೆ ರೂಡಿಸಿಕೊಳ್ಳಬೇಕು. ಪ್ರಚಲಿತ ವಿದ್ಯಮಾನಗಳನ್ನು ತಿಳಿಯಲು ದಿನಪತ್ರಿಕೆ ಓದುಬೇಕು. ಸ್ಪರ್ಧಾರ್ಥಿಗಳು ಉತ್ತಮವಾದ ಹವ್ಯಾಸಗಳನ್ನು ಹೊಂದಿರಬೇಕು.ಮಾದರಿ ಪರೀಕ್ಷೆಗಳನ್ನು ಬರೆಯುವುದರಿಂದ ಸ್ಪರ್ಧಾರ್ಥಿಗಳಿಗೆ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಹೇಳಿದರು.
ಮಾರ್ಗದರ್ಶಕ ಹಾಗೂ ಶಿಕ್ಷಕ ಗೋಪಾಲ ನಾಯಕ ಜೂಕೂರು ಮಾತನಾಡಿ ಅಧ್ಯಯನದಿಂದ ಮಾತ್ರ ಉನ್ನತ ಹುದ್ದೆ ಪಡೆಯಬಹುದು.ಚಂದ್ರ ತಾರಾ ಬಲಕ್ಕಿಂತ ತಮ್ಮ ಜ್ಞಾನ ಬಲ ಹಾಗೂ ಬುದ್ಧಿ ಬಲದ ಮೇಲೆ ನಂಬಿಕೆಯಿಟ್ಟು ಪ್ರಯತ್ನಿಸಿದರೆ ಫಲ ಸಿಗಲು ಸಾಧ್ಯವಿದೆ ಎಂದು ಹೇಳಿದರು.
![]() |
![]() |
![]() |
![]() |
![]() |
[ays_poll id=3]