K2 ಕ್ರೈಂ ನ್ಯೂಸ್ : ಸಿಐಎಸ್ಎಫ್ ನಲ್ಲಿ ಪಿಎಸ್ಐ ಆಗಿ ಕಾರ್ಯ ನಿರ್ವಹಿಸುತಗತಿದ್ದ ರಾಯಚೂರು ಮೂಲದ ನಿವಾಸಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ.
ಹೌದು ರಾಯಚೂರು ಜಿಲ್ಲೆಯ ನಿವಾಸಿ ಮಂಗಳೂರಿನ ಸಿಐಎಸ್ಎಫ್ ವಿಭಾಗದಲ್ಲಿ ಪಿಎಸ್ಐ ಆಗಿ ಕಾರ್ಯ ನಿಭಾಯಿಸುತ್ತಿದ್ದ ಜಾಕೀರ್ ಹುಸೈನ್ (58) ಆತ್ಮಹತ್ಯೆ ಮಾಡಿಕೊಂಡಿದ್ದು. ಬೆಳಿಗ್ಗೆ 6.30ರ ಸುಮಾರಿಗೆ ಪಾಳಿ ಮುಗಿಸಿ ಮುಖ್ಯ ಗೇಟ್ನ ಪಕ್ಕದಲ್ಲಿರುವ ವಾಶ್ರೂಮ್ಗೆ ತೆರಳಿದ್ದರು.
ಹುಸೇನ್ ಅವರನ್ನು ಎನ್ಎಂಪಿಟಿ ಮುಖ್ಯ ಗೇಟ್ನಲ್ಲಿ ನೈಟ್ ಶಿಫ್ಟ್ನಲ್ಲಿ ನಿಯೋಜಿಸಲಾಗಿತ್ತು. ವಾಷ್ ರೂಂಗೆ ತೆರಳಿದ್ದ ಅವರು ಅಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಗೆ ಕಾರಣ ತಿಳಿದುಬಂದಿಲ್ಲ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.
[ays_poll id=3]