This is the title of the web page
This is the title of the web page
Crime NewsState News

ಕುದಲೆಳೆ ಅಂತರದಲ್ಲಿ ಶಾಲಾ ಮಕ್ಕಳು ಪಾರು.. ಪ್ರವಾಸಕ್ಕೆ ತೆರಳಿದ್ದ ಬಸ್ ಅಪಘಾತ


K2kannadanews.in

(Crime News) ರಾಯಚೂರು : ಶಾಲಾ ಮಕ್ಕಳನ್ನು (School students) ಹೊತ್ತು ಪ್ರವಾಸಕ್ಕೆ (Trip) ತೆರಳಿದ್ದ ಬಸ್ ಪಲ್ಟಿಯಾಗಿ (bus overturned) ಗದ್ದೆಗೆ ಉರುಳಿ ಬಿದ್ದ ಘಟನೆ ರಾಯಚೂರು (Raichur) ಜಿಲ್ಲೆಯ ಅಂಜಳ ಕ್ರಾಸ್ ಬಳಿ ಘಟನೆ ನಡೆದಿದೆ.

ಹೌದು ರಾಯಚೂರು ಜಿಲ್ಲೆಯ ದೇವದುರ್ಗ (Devadurga) ತಾಲ್ಲೂಕಿನ ಅಂಜಳ ಕ್ರಾಸ್ (Anjihalla cross) ಬಳಿ ಬಸ್ ಅಪಘಾತಕ್ಕೀಡಾಗಿದೆ. ಬೆಳಗಿನ ಜಾವ (early morning) 2 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಕೆಕೆಆರ್ ಟಿಸಿ ಬಸ್ )KKRTC Bus) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಗದ್ದೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ (Fortunately) ಯಾವುದೇ ಸಾವು ನೋವು ಸಂಭವಿಸದೇ, ಬಸ್ ನಲ್ಲಿದ್ದ ಹಲವು ಮಕ್ಕಳು ಸಣ್ಣ ಪುಟ್ಟ ಗಾಯಗಳಾಗಿವೆ (minor injuries).

ಬಸ್ ಅಪಘಾತದಿಂದಾಗಿ ಬೆಳಗಿನವರೆಗೂ ಮಕ್ಕಳು, ಶಿಕ್ಷಕರು ರಸ್ತೆಯಲ್ಲಿಯೇ ಚಳಿಯಲ್ಲಿ ಪರದಾಡಿದ್ದಾರೆ. ಬಳಿಕ ದೇವದುರ್ಗ ಘಟಕದಿಂದ ಮತ್ತೊಂದು ಬಸ್ ಕಳುಹಿಸಿ ಮಕ್ಕಳು, ಶಿಕ್ಷಕರನ್ನು ಕರೆದೊಯ್ಯಲಾಗಿದೆ.


[ays_poll id=3]