K2kannadanews.in
brutal attack ರಾಯಚೂರು : ಖಾಲಿ ಜಾಗ(ನಿವೇಶನ) ಒತ್ತುವರಿ (Occupy) ವಿಚಾರಕ್ಕೆ ಸುಮಾರು 15 ಜನರಿಂದ (People) ಒಂದು ಕುಟುಂಬದ (Family) ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಅಮಾನವೀಯ ಘಟನೆ ಮದ್ಲಾಪುರ ಗ್ರಾಮದಲ್ಲಿ ನಡೆದಿದ್ದು, ಹಲ್ಲೆ ಮಾಡುತ್ತಿರುವ ಭಯಾನಕ ವೀಡಿಯೋ K2ನ್ಯೂಸ್ ಗೆ ಲಭ್ಯವಾಗಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಮದ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಲ್ಲಿಕಾರ್ಜುನ ಎಂಬುವರ ತಂದೆಯ ಹೆಸರಲ್ಲಿ ಇರುವಂತಹ ಸ್ಥಳವನ್ನು ಒತ್ತುವರಿ ಮಾಡುತ್ತಿದ್ದರು ಹಲ್ಲೆ ಮಾಡಿದ ವ್ಯಕ್ತಿಗಳು. ಒತ್ತುವರಿ ಮಾಡಿದ್ದಲ್ಲದೆ ದಬ್ಬಾಳಿಕೆಯೂ ಮಾಡುತ್ತಿದ್ದರಂತೆ. ಹಲ್ಲೆಗೊಳಗಾಗದ ಮಲ್ಲಿಕಾರ್ಜುನ ಪಬ್ಲಿಕ್ ನೆಕ್ಸ್ಟ್ ಗೆ ಮಾಹಿತಿ ನೀಡಿದ್ದಾರೆ.
ಮಲ್ಲಿಕಾರ್ಜುನ ಮತ್ತು ಕುಟುಂಬದ ಮೇಲೆ ಅದೇ ಗ್ರಾಮದ 15 ಜನರಿಂದ ಹಲ್ಲೆ ನಡೆದಿದೆ. ಹಾಡು ಹಗಲೇ ಕೊಡಲಿ, ರಾಡ್, ಬ್ಯಾಟ್ ಕಟ್ಟಿಗೆಯಿಂದ ಅಮಾನುಷವಾಗಿ ಹಲ್ಲೆಮಾಡಿದ್ದು, ಹುಲುಗಪ್ಪ, ಅಭಿಷೇಕ್, ಚಂದ್ರಶೇಖರ, ಲಿಂಗಾರೆಡ್ಡಿ, ಅರುಣ್ ಕುಮಾರ್ ಸೇರಿ 15 ಜನರು ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಗಾದ ಮಲ್ಲಿಕಾರ್ಜುನ್
ಆರೋಪ ಮಾಡಿದ್ದು, ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..
[ays_poll id=3]