K2kannadanews.in
Crime News : ಮನೆ ಟೆರೇಸ್ ಮೇಲೆ ಗಾಳಿಪಟದೊಂದಿಗೆ (Kite) ಆಡುತ್ತಿದ್ದ ಬಾಲಕ ವಿದ್ಯುತ್ (electricity) ಸ್ಪರ್ಶಿಸಿ ಮೃತಪಟ್ಟ ಘಟನೆ ಹೈದರಾಬಾದ್ ನ (Hyderabad) ಅತ್ತಾಪುರ ಪ್ರದೇಶದಲ್ಲಿ ನಡೆದಿದೆ. ತನಿಷ್ಕ್ (11) ಮೃತ ಬಾಲಕ. ಅತ್ತಾಪುರದ ಲಕ್ಷ್ಮಿ ವಾಣಿ ಟವರ್ಸ್ನಲ್ಲಿ ಈ ಘಟನೆ ನಡೆದಿದೆ.
ಸಂಕ್ರಾಂತಿ (sankranti) ಹಬ್ಬದ ಹಿನ್ನೆಲೆಯಲ್ಲಿ ಮನೆಗೆ ತಂದಿದ್ದ ಗಾಳಿಪಟ ಹಾರಿಸಲು ತನಿಷ್ಕ್ ಅಪಾರ್ಟ್ಮೆಂಟ್ (Apartment) ಕಟ್ಟಡದ ಟೆರೇಸ್ ಗೆ ಹೋಗಿದ್ದು,ಅಲ್ಲಿ ಸ್ನೇಹಿತರೊಂದಿಗೆ ಗಾಳಿಪಟ ಹಾರಿಸುತ್ತಿದ್ದಾಗ ಗಾಳಿ ಪಟದ ದಾರ ವಿದ್ಯುತ್ ತಂತಿಗೆ ಸಿಲುಕಿದೆ. ಅದನ್ನು ಬಿಡಿಸಲು ಹೋದ ಬಾಲಕಿನಿಗೆ ವಿದ್ಯುತ್ ಸ್ಪರ್ಶವಾಗಿದೆ. ತಕ್ಷಣ ಅವನು ಕಿರುಚಿಕೊಂಡಿದ್ದಾನೆ.
ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ (hospital) ದಾಖಲಿಸಿದ್ದಾರೆ. ಆದರೆ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು (Doctor) ತಿಳಿಸಿದ್ದಾರೆ. ತನಿಷ್ಕ್ ಚಿಕ್ಕಪ್ಪ ಅಭಿಷೇಕ ಉಬಾಳೆ ಅತ್ತಾಪುರ ಪೊಲೀಸರಿಗೆ (Police) ದೂರು ನೀಡಿದ್ದು, ಅಪಾರ್ಟ್ಮೆಂಟ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
[ays_poll id=3]