K2kannadanews.in
Election News ರಾಯಚೂರು: ಲೋಕಸಭೆ ಚುನಾವಣೆ (Loka sbha election) ಹಿನ್ನಲೆ ಬಿಜೆಪಿ (BJP) ಅಭ್ಯರ್ಥಿ ಪರ ಪ್ರಚಾರ ಮಾಡಲು ತೆಲುಗಿನ ಖ್ಯಾತ ನಟ (Actor), ಜನಸೇನಾ ಪಕ್ಷದ (janasena party) ಸಂಸ್ಥಾಪಕ ಪವನ್ ಕಲ್ಯಾಣ (Pawan kalyan) ರಾಯಚೂರು ಕಾರ್ಯಕ್ರಮ ಬಹುತೇಕ ರದ್ದಾಗಿದೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ (April 18) ರಂದು ಯರಮರಸ್ ಸರ್ಕ್ಯುಟ್ ಹೌಸ್ ಬಳಿಯ ಹೆಲಿಪಾಡ್(helipad) ಬಂದಿಳಿಯುವ ಅವರು, ಗಂಜ್ ಮೂಲಕ ರೋಡ್ ಶೋನಲ್ಲಿ (Road Show) ಪಾಲ್ಗೊಳ್ಳಬೇಕಿತ್ತು. ರಾಯಚೂರು (Raichur) ಆಂಧ್ರ (andra), ತೆಲಂಗಾಣಕ್ಕೆ (Telangana) ಹೊಂದಿರುವ ಜಿಲ್ಲೆಯಾಗಿದ್ದು, ಈ ಭಾಗದಲ್ಲಿ ಪವನ್ ಕಲ್ಯಾಣ ಅಭಿಮಾನಿಗಳು (Fans) ಸಾಕಷ್ಟಿದ್ದು, ನೆಚ್ಚಿನ ನಟ ಬರುವ ಸಂಗತಿ ಅವರಿಗೆ ಖುಷಿ ಕೊಟ್ಟಿತ್ತು, ಆದ್ರೆ ಇದೀಗ ಅವರ ಕಾರ್ಯಕ್ರಮ ರದ್ದಾಗಿದೆ ಎನ್ನಲಾಗುತ್ತಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.
[ays_poll id=3]