K2kannadanews.in
Election News ರಾಯಚೂರು: ಲೋಕಸಭೆ ಚುನಾವಣೆ (Loka sbha election) ಹಿನ್ನಲೆ ಬಿಜೆಪಿ (BJP) ಅಭ್ಯರ್ಥಿ ಪರ ಪ್ರಚಾರ ಮಾಡಲು ತೆಲುಗಿನ ಖ್ಯಾತ ನಟ (Actor), ಜನಸೇನಾ ಪಕ್ಷದ (janasena party) ಸಂಸ್ಥಾಪಕ ಪವನ್ ಕಲ್ಯಾಣ (Pawan kalyan) ರಾಯಚೂರಿಗೆ ಬರಲಿದ್ದಾರೆ.
ಏಪ್ರಿಲ್ (April 11) ರಂದು ಯರಮರಸ್ ಸರ್ಕ್ಯುಟ್ ಹೌಸ್ ಬಳಿಯ ಹೆಲಿಪಾಡ್(helipad) ಬಂದಿಳಿಯುವ ಅವರು, ಕಾರಿನಲ್ಲಿ (Car) ಗಂಜ್ ವರೆಗೆ ಆಗಮಿಸುವರು. ಬಳಿಕ ರೋಡ್ ಶೋನಲ್ಲಿ (Road Show) ಪಾಲ್ಗೊಳ್ಳುವರು. ನಗರದ ಗಂಜ್ ವೃತ್ತದಲ್ಲಿ ರೋಡ್ ಶೋಗೆ ಚಾಲನೆ ನೀಡುತ್ತಿದ್ದು, ಆರ್ ಟಿ ಒ ವೃತ್ತದವರೆಗೂ ರೋಡ್ ಶೋ ನಡೆಯಲಿದೆ.
ರಾಯಚೂರು (Raichur) ಆಂಧ್ರ (andra), ತೆಲಂಗಾಣಕ್ಕೆ (Telangana) ಹೊಂದಿರುವ ಜಿಲ್ಲೆಯಾಗಿದ್ದು, ಈ ಭಾಗದಲ್ಲಿ ಪವನ್ ಕಲ್ಯಾಣ ಅಭಿಮಾನಿಗಳು (Fans) ಸಾಕಷ್ಟಿದ್ದು, ನೆಚ್ಚಿನ ನಟ ಬರುವ ಸಂಗತಿ ಅವರಿಗೆ ಖುಷಿ ಕೊಟ್ಟಿದೆ. ಗಂಜ್ ವೃತ್ತ, ಮಹಾಬಳೇಶ್ವರ ವೃತ್ತ, ಪಟೇಲ್ ರೋಡ್, ಬಿ ಆರ್ ಬಿ ವೃತ್ತದ ಮುಖಾಂತರ ಆರ್ ಟಿ ಓ ವೃತ್ತದ ವರೆಗೆ ರೋಡ್ ಶೋ ನಡೆಯಲಿದೆ. ನಂತರ ಅವರು ಬಳ್ಳಾರಿಗೆ ತೆರಳಿ ಅಲ್ಲಿ ಶ್ರೀರಾಮಲು ಪರ ಪ್ರಚಾರ ನಡೆಸಲಿದ್ದಾರೆ.
[ays_poll id=3]