This is the title of the web page
This is the title of the web page
Politics News

ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕ..?


K2 ಪೊಲಿಟಿಕಲ್ ನ್ಯೂಸ್ : ರಾಜ್ಯ ರಾಜಕೀಯದಲ್ಲಿ ಸಚಿವ ಸ್ಥಾನದ ಹಗ್ಗ ಜಗ್ಗಾಟ ಮುಗಿದು ಪೂರ್ಣಪ್ರಮಾಣದಲ್ಲಿ ಸರ್ಕಾರ ರಚನೆಯಾಗಿದೆ. ಇದೀಗ ಸಿದ್ದರಾಮಯ್ಯ ಸರ್ಕಾರದ ಸಚಿವರುಗಳಿಗೆ ಜಿಲ್ಲಾ ಉಸ್ತುವಾರಿ ಸ್ಥಾನಗಳನ್ನು ಕೂಡ ನೀಡಲಾಗಿದೆ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ಬನ್ನಿ ನೋಡೋಣ.

ರಾಜ್ಯ ರಾಜಧಾನಿ ಬೆಂಗಳೂರಿನ ಉಸ್ತುವಾರಿ ಸಚಿವರ ಹೊಣೆಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ಹೆಗಲೇರಿದೆ. ಇದೇ ರೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ನೇಮಕ ಮಾಡಲಾಗಿದ್ದು, ರಾಯಚೂರು ಎನ್ ಎಸ್ ಬೋಸ್ ರಾಜು ಉಸ್ತುವರಿನ್ನಾಗಿ ನೇಮಿಸಲಾಗಿದೆ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರು?

ಬೆಂಗಳೂರು ನಗರ ಕೆ ಜೆ ಜಾರ್ಜ್, ಬೆಂಗಳೂರು ಗ್ರಾಮಾಂತರ ರಾಮಲಿಂಗಾ ರೆಡ್ಡಿ, ಕೋಲಾರ ಕೆ ಎಚ್ ಮುನಿಯಪ್ಪ, ಚಿಕ್ಕಬಳ್ಳಾಪುರ ಡಾ.ಎಂ.ಸಿ.ಸುಧಾಕರ, ರಾಮನಗರ ಡಿ ಕೆ ಶಿವಕುಮಾರ, ಮೈಸೂರು ಡಾ.ಎಚ್ ಸಿ ಮಹದೇವಪ್ಪ, ಚಾಮರಾಜನಗರ ದಿನೇಶ್ ಗುಂಡೂರಾವ್, ಕೊಡಗು ವೆಂಕಟೇಶ್, ದಕ್ಷಿಣಕನ್ನಡ ಕೃಷ್ಣ ಬೈರೇಗೌಡ, ಉಡುಪಿ ಡಾ ಜಿ ಪರಮೇಶ್ವರ, ಉತ್ತರ ಕನ್ನಡ ಮಂಕಾಲ್ ವೈದ್ಯ, ಧಾರವಾಡ ಸಂತೋಷ್ ಲಾಡ್, ಬೆಳಗಾವಿ ಸತೀಶ್ ಜಾರಕಿಹೊಳಿ, ಬೀದರ್ರ ಹೀಮ್ ಖಾನ್, ಕಲಬುರಗಿ ಶರಣ ಪ್ರಕಾಶ್ ಪಾಟೀಲ್, ವಿಜಯಪುರ ಎಮ್ ಬಿ ಪಾಟೀಲ್, ಮಂಡ್ಯ ಚೆಲುವರಾಯ ಸ್ವಾಮಿ, ಬಳ್ಳಾರಿ ನಾಗೇಂದ್ರ, ಗದಗ ಎಚ್ ಕೆ ಪಾಟೀಲ್, ಹಾವೇರಿ ಬಿ ಝಡ್ ಝಮೀರ್ ಅಹ್ಮದ್ ಖಾನ್, ಕೊಪ್ಪಳ ಶಿವರಾಜ್ ತಂಗಡಗಿ, ಯಾದಗಿರಿ ಶರಣಪ್ಪಬಸಪ್ಪ ದರ್ಶನಾಪುರ, ಬಾಗಲಕೋಟೆ ಶಿವಾನಂದ ಪಾಟೀಲ್, ವಿಜಯನಗರ ಲಕ್ಷ್ಮೀ ಹೆಬ್ಬಾಳ್ಕರ್, ತುಮಕೂರು ಕೆ ಎನ್ ರಾಜಣ್ಣ, ಚಿತ್ರದುರ್ಗ ಡಿ ಸುಧಾಕರ, ಶಿವಮೊಗ್ಗ ಮಧು ಬಂಗಾರಪ್ಪ, ಹಾಸನ ಈಶ್ವರ್ ಖಂಡ್ರೆ, ಚಿಕ್ಕಮಗಳೂರು ಪ್ರಿಯಾಂಕ್ ಖರ್ಗೆ, ದಾವಣಗೆರೆ ಎಸ್ ಎಸ್ ಮಲ್ಲಿಕಾರ್ಜುನ.


[ays_poll id=3]