This is the title of the web page
This is the title of the web page
Crime NewsLocal NewsVideo News

ಬಿಸಿಲ ತಾಪಕ್ಕೆ ಮತ್ತೊಬ್ಬ ವೃದ್ಧ ಕುಸಿದ ಬಿದ್ದು ಸಾವು..!

Oplus_131072

K2kannadanews.in

Sunshine old man Died ರಾಯಚೂರು : ಬಿಸಿಲಿನ ಝಳ ತಾಳಲಾರದೇ ರಸ್ತೆಯಲ್ಲಿ (Road) ನಡೆದುಕೊಂಡು ಹೋಗುತ್ತಿದ್ದ ವೇಳೆ  ವೃದ್ದರೊಬ್ಬರು (Old man) ಕುಸಿದು ಬಿದ್ದು (collapsed) ಮೃತಪಟ್ಟ ಘಟನೆ ಜರುಗಿದೆ‌.

ರಾಯಚೂರು (Raichur) ನಗರದ ಯಕ್ಲಾಸಪುರ ನಿವಾಸಿ ರಾಮಣ್ಣ ( Ramanna 70) ಅವರು ಬಿಸಿಲಿಗೆ ಮೃತಪಟ್ಟ ವೃದ್ಧ ಎನ್ನಲಾಗುತ್ತಿದೆ. ಭಾನುವಾರ ಮಧ್ಯಾನ ಬಿಸಿಲಿನಲ್ಲಿ ನಡೆದು ಹೊಗುತ್ತಿದ್ದ ವೇಳೆ, ನಿಶ್ಯಕ್ತಿಗೆ (exhaustion) ಒಳಗಾಗಿ ತಲೆ ಸುತ್ತು ಬಂದು ಏಕಾಏಕಿ ಕುಸಿದು ಬಿದ್ದ ಅಲ್ಲಿಯೇ ಮೃತಪಟ್ಟಿದ್ದಾರೆ (Died) ಎಂದು ಹೇಳಲಾಗುತ್ತಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು (Police) ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ವೃದ್ಧ ರಾಮಣ್ಣನ ದೇಹವನ್ನು (dead body) ಹಸ್ತಾಂತರಿಸಿದ್ದಾರೆ.

ಇನ್ನು ತಿಂಗಳ ಅಂತರದೊಳಗೆ (Between month) ರಾಯಚೂರು ಜಿಲ್ಲೆಯಲ್ಲಿ ಬಿಸಿಲಿನಿಂದ ನಾಲ್ಕು ಜೀವಗಳು (Four people) ಕಳೆದುಕೊಂಡಂತಾಗಿದೆ. ಮಾನ್ವಿ (Manvi) ಬಳಿ ಪಾದಯಾತ್ರೆ ಹೊರಟಿದ್ದ ಶ್ರೀಶೈಲ್ ಎಂಬ ಯುವಕ, ಲಿಂಗಸುಗೂರು (Lingasuguru) ಬಸ್ ನಿಲ್ದಾಣದಲ್ಲಿ ಕೃಷ್ಣಪ್ಪ ಎಂಬ ವೃದ್ಧ, ಸಿಂಧನೂರುನಲ್ಲಿ (Sindhanur) ಬಿಸಿಲಿನ ತಾಪಕ್ಕೆ ವಾಂತಿ ಬೇದಿ ಆಗಿ ಬಾಣಂತಿ ಮಹಿಳೆ ಮೃತಪಟ್ಟಿದ್ದರು. ಇದೀಗ ರಾಯಚೂರಿನ (Raichur) ರಾಮಣ್ಣ ಕಬ್ಬೇರ್‌ ಎಂಬುವವರು ಭಾನುವಾರ ಮದ್ಯಾನ  ಬಿಸಿಲಿನಿಂದ ಬಳಲಿ ಮೃತಪಟ್ಟಿದ್ಧಾರೆ.


[ays_poll id=3]