K2 ಪೊಲಿಟಿಕಲ್ ನ್ಯೂಸ್ : ಕಾಂಗ್ರೆಸ್ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ ಮಾಜಿ ಶಾಸಕ ಸಿಟಿ ರವಿ ಕುಡಿದು ಹಾಳಾಗಿ ಎನ್ನುವುದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಆಗಿದೆ ಎಂದು ವ್ಯಂಗ್ಯಮಾಡಿದರು.
ಮದ್ಯದ ವಿಚಾರದಲ್ಲಿ ನೀ ಅತ್ತಂಗೆ ಮಾಡು ನಾನು ಸತ್ತಂಗೆ ಮಾಡುತ್ತೇನೆ ಎನ್ನುವುದು ಕಾಂಗ್ರೆಸ್ನ ನಿಲುವಾಗಿದೆ. ಈಗಾಗಲೇ ಹಳ್ಳಿಗಳಿಗೆ ಅನಧಿಕೃತವಾಗಿ ಮದ್ಯ ಪೂರೈಕೆ ಆಗುತ್ತಿದೆ. ಮಾಲ್, ಸೂಪರ್ ಮಾರ್ಕೆಟ್ಗಳಲ್ಲೂ ಮದ್ಯ ಮಾರಾಟಕ್ಕೆ ಮುಂದಾಗಿದ್ದಾರೆ. ಆದರೂ ಇವರು ತಮ್ಮನ್ನು ಗಾಂಧಿವಾದಿಗಳು ಎಂದು ಹೇಳಿಕೊಳ್ಳುತ್ತಾರೆ. ಇದು ಆರನೇ ಗ್ಯಾರಂಟಿ ಇರಬೇಕು ಎಂದು ಕಾಂಗ್ರೆಸ್ ಸರ್ಕಾರದ ಯೋಜನೆಗಳನ್ನು ಲೇವಡಿ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಸರ್ಕಾರದ ಪತನದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಬಿಜೆಪಿ , ಜೆಡಿಎಸ್ನಿಂದ ಅಪಾಯ ಇಲ್ಲ. ಅಪಾಯ ಇದ್ದರೆ ಅದು ಒಳಗಡೆಯಿಂದ ಮಾತ್ರವಾಗಿದೆ. ಸರ್ಕಾರದ ಪತನ ಒಳಗಿಂದಲೇ ಎಂದು ಸಿಟಿ ರವಿ ಭವಿಷ್ಯ ನುಡಿದರು.
[ays_poll id=3]