This is the title of the web page
This is the title of the web page
Crime NewsState News

ಗೆಳೆಯರ ಜತೆ ಪಾರ್ಟಿಗೆ ತೆರಳಿದ್ದ ಯುವಕ ಶವವಾಗಿ ಪತ್ತೆ…?


K2kannadanewsil.in

Murder Case ಮಾನ್ವಿ : ಮೂರು ದಿನಗಳ ಹಿಂದೆ ಮನೆಯಿಂದ ಸ್ನೇಹಿತರ (Friends) ಜತೆಗೆ ಪಾರ್ಟಿ (Party) ಮಾಡಬೇಕೆಂದು ಹೇಳಿ ತೆರಳಿದ್ದ ಯುವಕ ಶವವಾಗಿ (Dead body found) ಪತ್ತೆಯಾದ ಘಟನೆ ಮಿಟ್ಟಿ ಕ್ಯಾಂಪ್‌ ಗ್ರಾಮದಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ನೀರಮಾನ್ವಿ ಬಳಿಯ ಮಿಟ್ಟಿ ಕ್ಯಾಂಪ್‌ ಗ್ರಾಮದ ಹೊಲದಲ್ಲಿ (Land) ಮೃತದೇಹ ಪತ್ತೆಯಾಗಿದ್ದು, ಸುರೇಶ್ ನಾಯಕ್ (suresh nayak 20) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಮನೆಯಿಂದ ಸುರೇಶ್‌ ಸ್ನೇಹಿತರ ಜೊತೆ ಪಾರ್ಟಿ (Party with friends) ಮಾಡಬೇಕೆಂದು ಹೇಳಿ ತೆರಳಿದ್ದವ ಮನೆಗೆ ಬಾರದೆ ನಿಗೂಢವಾಗಿ (mysteriously) ನಾಪತ್ತೆಯಾಗಿದ್ದ (disappeared). ಈ ಹಿನ್ನಲೆ ಕುಟುಂಬಸ್ಥರು (Family) ಕಾಣೆಯಾಗಿರುವ ಬಗ್ಗೆ ದೂರು (Case) ಕೊಟ್ಟಿದ್ದರು. ಇದೀಗ ಕ್ಯಾಪ್ ಹೊರ ವಲಯದ ಹೊಲದಲ್ಲಿನ ಕಲ್ಲುಬಂಡೆ ಬಳಿ ಸುಟ್ಟ ಸ್ಥಿತಿಯಲ್ಲಿ (burnt condition) ಶವ ಪತ್ತೆಯಾಗಿದೆ.

ಸುರೇಶ್ ಬೆಂಗಳೂರಲ್ಲಿ (Benglore) ಮೇಸ್ತ್ರಿ ಕೆಲಸ ಮಾಡುತ್ತಿದ್ದ, ಜಾತ್ರೆಗಾಗಿ ಮಾನ್ವಿ ಪಟ್ಟಣಕ್ಕೆ (City) ಬಂದವ ಶವವಾಗಿದ್ದಾನೆ. ಸುರೇಶ ಹತ್ಯೆಗೆ (Murder) ಕಾರಣ ತಿಳಿದು ಬಂದಿಲ್ಲ. ಪಾರ್ಟಿಗೆ ಕರೆದ ಆತನ ಸ್ನೇಹಿತರೇ ಹತ್ಯೆ (Friends did murder) ಮಾಡಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹ ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಾನ್ವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಸುರೇಶ್‌ನ ಸ್ನೇಹಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.


[ays_poll id=3]