ಸಿಂಧನೂರು : ಸಾಕಷ್ಟು ಸುದ್ದಿಯಲ್ಲಿರುವ ಜನಾರ್ದನ್ ರೆಡ್ಡಿ ಅವರು ನಾಳೆ ಮಸ್ಕಿಯಲ್ಲಿ ಪ್ರಮುಖರ ಸಭೆ ಮಾಡಲಿದ್ದಾರೆ. 100 ಗಂಟೆ ಕಾಯಿರಿ ನನ್ನ ಮುಂದಿನ ನಡೆಯ ಬಗ್ಗೆ ಎಲ್ಲಾ ಹೇಳುತ್ತೇನೆ ಎಂದು ತಮ್ಮ ನಡೆಯ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
ನಾಳೆ ಮಸ್ಕಿಯಲ್ಲಿ ನಡೆಯುತ್ತಿರುವಂತಹ ಪ್ರಮುಖರ ಸಭೆಯಲ್ಲಿ ಭಾಗವಹಿಸುವ ಹಿನ್ನೆಲೆ ಇಂದು ಹುಲಿಗೆಮ್ಮ ದೇವಿಯ ದರ್ಶನ ಪಡೆದ ಜನಾರ್ದನ್ ರೆಡ್ಡಿ ಅವರು ನಂತರ ಸಿಂಧನೂರು ನಗರದ ವಾಣಿಜ್ಯೋದ್ಯಮಿ ರಾಜೇಶ್ ಹಿರೇಮಠ್ ಅವರ ಮನೆಗೆ ಭೇಟಿ ಮಾತುಕತೆ ನಡೆಸಿದ್ದು ಮತ್ತೊಂದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ತಮ್ಮ ರಾಜಕೀಯ ಮುಂದಿನ ನಡೆಯ ಬಗ್ಗೆ ಕೇಳಿದ ಪ್ರಶ್ನೆಗೆ ಜನವರಿ 5ರಂದು ನನ್ನ ಮುಂದಿನ ರಾಜಕೀಯ ನಡೆ ಬಗ್ಗೆ ಹೇಳುತ್ತೇನೆ. 100 ಗಂಟೆಗಳ ಕಾಲ ತಾಳ್ಮೆಯಿಂದ ಇದ್ದರೆ ನನ್ನ ಮುಂದಿನ ನಡೆ ಗೊತ್ತಾಗುತ್ತದೆ ಎಂದು ತಮ್ಮ ಮುಂದಿನ ನಡೆಯ ಬಗ್ಗೆ ಮತ್ತಷ್ಟು ನಿಗೂಢವಾಗಿಯೇ ಇಟ್ಟಿದ್ದಾರೆ.
100 ಗಂಟೆ ತಡೆಯಿರಿ ನನ್ನ ರಾಜಕೀಯ ನಡೆ ಗೊತ್ತಾಗುತ್ತದೆ..
ಉತ್ತಮ ಸುದ್ದಿಗಳಿಗಾಗಿ K2 ಕನ್ನಡ ನ್ಯೂಸ್ ಸಬ್ಸ್ಕ್ರೈಬ್ ಮಾಡಿ.
[ays_poll id=3]