K2kannadanews.in
Truck caught fire ದೇವದುರ್ಗ : ತಿಂಗಳಾನುಗಟ್ಟಲೆ ಕಷ್ಟಪಟ್ಟು ಮಳೆ (Rain) ಇಲ್ಲದಿದ್ದರೂ ಬೆಳೆದ ಮೆಣಸಿನಕಾಯಿ (Chilli) ಮಾರಾಟ (seal) ಮಾಡಲು ಸಾಗಿಸುತ್ತಿದ್ದ ವೇಳೆ ವಿದ್ಯುತ್ ತಂತಿ (electricity wire) ತಗಲಿ ಮೆಣಸಿನ ಕಾಯಿ ಸುಟ್ಟು ಬಸ್ಮವಾದ ಘಟನೆ ಯರಮಸಾಳ ಕ್ರಾಸ್ ಬಳಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಯರಮಸಾಳ ಕ್ರಾಸ್ (Cross) ಬಳಿ ಘಟನೆ ನಡೆದಿದ್ದು, ಒಣ ಮೆಣಸಿನಕಾಯಿ
ರಾಯಚೂರಿನ ಮಾರುಕಟ್ಟೆಗೆ (Market) ಲಾರಿಯಲ್ಲಿ 500 ಚೀಲ (Bags) ಸಾಗಿಸುವಾಗ ದುರಂತ ಸಂಭವಿಸಿದ. ರಸ್ತೆ ಮಧ್ಯೆ ಹೈವೋಲ್ಟೇಜ್ (High Voltage) ತಂತಿ ತಗುಲಿದ ಹಿನ್ನೆಲೆ ಲಾರಿಯಲ್ಲಿ 200 ಚೀಲ ಮೆಣಸಿನಕಾಯಿ ಸುಟ್ಟು ಕರಕಲಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಘಟನೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ ರೈತನ (Farmer) ಪರಿಸ್ಥಿತಿ. ದೇವದುರ್ಗ ಪೊಲೀಸ್ ಠಾಣೆ (Police station) ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು. ಇದು ಎಷ್ಟು ಜನ ರೈತರಿಗೆ ಸೇರಿದ್ದು ಮತ್ತು ಎಲ್ಲಿಯ ರೈತರದ್ದು ಎಂಬ ಮಾಹಿತಿ ದೊರೆಯಬೇಕಿದೆ.
[ays_poll id=3]