K2kannadanews.in
young woman death ಮಾನ್ವಿ : ಕೆಲವೇ ದಿನಗಳಲ್ಲಿ ಹಸೆಮಣೆ (marriage) ಏರಬೇಕಿದ್ದ ಯುವತಿ, ದಾಹ ತೀರಿಸಿಕೊಳ್ಳಲು ಕೆರೆಗೆ (Lake) ಇಳಿದು, ನೀರುಪಾಲಾದ ಘಟನೆ ಪೆಚಲಬಂಡ ಕ್ಯಾಂಪ್ನಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಪೆಚಲಬಂಡ ಕ್ಯಾಂಪ್ನಲ್ಲಿ ನಡೆದಿದೆ. ಲಕ್ಷ್ಮಿ (lakshmi 19) ಕೆರೆಯಲ್ಲಿ ಮುಳುಗಿ ಮೃತಪಟ್ಟ (dai) ದುರ್ದೈವಿ. ಎಂದಿನಂತೆ ಅಕ್ಕ-ತಂಗಿ ಇರಿಬ್ಬರು ಕುರಿ ಕಾಯಲು (herd sheep) ಕ್ಯಾಂಪ್ ಹೊರ ವಲಯಕ್ಕೆ ತೆರಳಿದ್ದರು. ಈ ವೇಳೆ ಅಕ್ಕ (Sister) ಲಕ್ಷ್ಮಿಗೆ ಬಾಯಾರಿಕೆಯಾಗಿದ್ದು, ಪಕ್ಕದ ಜಮೀನಿನಲ್ಲಿದ್ದ ಕೆರೆಗೆ ನೀರು ಕುಡಿಯಲು (Drink water) ಹೋಗಿದ್ದಳು. ಆದರೆ ದುರದೃಷ್ಟವಶಾತ್ ಕಾಲು ಜಾರಿ ಬಿದ್ದು, ಕೆರೆಯಲ್ಲಿ ಮುಳುಗಿದ್ದಳು, ಸ್ಥಳೀಯರು ಯುವತಿಯನ್ನು ಕೆರೆಯಿಂದ ಮೇಲಕ್ಕೆ ಎತ್ತಿ, ಆಸ್ಪತ್ರೆಗೆ (Hospital) ಸಾಗಿಸಿದರಾದರೂ ಮಾರ್ಗ ಮಧ್ಯೆ ಲಕ್ಷ್ಮಿ ಮೃತಪಟ್ಟಿದ್ದಾಳೆ.
ಮೃತ ಲಕ್ಷ್ಮಿ ವಿವಾಹ ನಿಶ್ಚಯವಾಗಿತ್ತು, ಮುಂದಿನ ವಾರ (Next week marriage) ಹಸೆಮಣೆ ಏರಲು ಸಜ್ಜಾಗಿದ್ದಳು. ಆದರೆ ಹೊಸ ಜೀವನಕ್ಕೆ ಕಾಲಿಡುವ ಮುನ್ನವೇ ಯುವತಿ ದುರಂತ ಅಂತ್ಯ ಕಂಡಿದ್ದಾಳೆ. ಮಗಳನ್ನು ಕಳೆದುಕೊಂಡ ಪೋಷಕರ (Parents) ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ (Poatmatam) ರವಾನಿಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮಾನವಿ ಪೊಲೀಸರು (Manvi police) ಪರಿಶೀಲನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
[ays_poll id=3]