ಕುಡಿದ ಮತ್ತಿನಲ್ಲಿ ಎರ್ರಾಬಿರ್ರಿ ಟಿಪ್ಪರ್ ಚಲಾಯಿಸಿ ಚಾಲಕ ಮಾಡಿದ ರಂಪಾಟ ಅಷ್ಟಿಷ್ಟಲ್ಲ..!
K2kannadanews.in
Drunken Driving ಯಾದಗಿರಿ : ಕುಡಿದ ಮತಗತಿನಲ್ಲಿ ಮನಬಂದಂತೆ ಟಿಪ್ಪರ್ ಚಾಲನೆ ಮಾಡಿ (Drunken Driving) ಅಪಘಾತ ಎಸಗಿ (Road Accident) ಪಾದಚಾರಿಯನ್ನು ಕೊಂದು, ರಸ್ತೆ ಪಕ್ಕದ ಮರ, ಟ್ರಾಕ್ಟರ್ ಗೆ ಘಾಸಿಗೊಳಿಸಿದ ಟಿಪ್ಪರ್ ಚಾಲಕನನ್ನು (Tipper Driver) ಜನ ಪೊಲಿಸರಿಗೆ ಒಪ್ಪಿಸಿದ್ದಾರೆ.
ಯಾದಗಿರಿ (Yadagiri news) ಜಿಲ್ಲೆಯ ಶಹಾಪುರ ನಗರದಲ್ಲಿ ಬೆಳಗಿನ ಜಾವ(early morning) ಘಟನೆ ನಡೆದಿದೆ. ಸಾಹಿಲ್ ಪಟೇಲ್ (18) ಮೃತ ದುರ್ದೈವಿ. ಕುಡಿದ ಮತ್ತಿನಲ್ಲಿದ್ದ ಟಿಪ್ಪರ್ ಚಾಲಕ ಯದ್ವಾತದ್ವಾ ಟಿಪ್ಪರ್ ಚಲಾಯಿಸಿ ರಸ್ತೆ ಪಕ್ಕ (road side) ನಿಂತಿದ್ದ ಯುವಕನಿಗೆ ಗುದ್ದಿದ್ದಾನೆ. ಸಾಹಿಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ನಂತರ ರಸ್ತೆ ಪಕ್ಕದಲ್ಲಿ ಇದ್ದ ಮರ (tree), ಟ್ರಾಕ್ಟರ್ (tractor) ಹಾಗೂ ವಿದ್ಯುತ್ ಕಂಬಕ್ಕೂ (electricity poll) ಡಿಕ್ಕಿ ಹೊಡೆದಿದ್ದು, ಸ್ಥಳದಿಂದ ವೇಗವಾಗಿ ಚಲಾಯಿಸಿ ಪರಾರಿಯಾಗಲು ಯತ್ನಿಸಿದ್ದಾನೆ ( try to escape). ಈ ವೇಳೆ ಸ್ಥಳೀಯರು ಟಿಪ್ಪರ್ ಮೇಲೆ ಕಲ್ಲು ತೂರಾಟ ನಡೆಸಿ, ನಂತರ ಟಿಪ್ಪರ್ ಸಹಿತ ಚಾಲಕನನ್ನು ಪೊಲೀಸರಿಗೆ (police) ಒಪ್ಪಿಸಿದ್ದಾರೆ. ಟಿಪ್ಪರ್ ಚಾಲಕ ಜೀವನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಹಾಪುರ ಪೊಲೀಸ್ ಠಾಣೆ (shahapur police station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
[ays_poll id=3]